ರಾಜ್ಯದ ಈ ಭಾಗದಲ್ಲಿ ತಂಪೆರೆದ ಮಳೆ!
06:03 PM Mar 14, 2024 IST | Bcsuddi
Advertisement
ಬೆಂಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ವರ್ಷದ ಮೊದಲ ಮಳೆ ಜೀವಸಂಕುಲಕ್ಕೆ ತಂಪೆರೆದಿದೆ. ರಣ ಬಿಸಿಲಿನಿಂದ ಕಂಗೆಟ್ಟು ಆಕಾಶದತ್ತ ಮುಖ ಮಾಡಿದ್ದ ರೈತಾಪಿ ಸಮುದಾಯಕ್ಕೆ ವರುಣದೇವ ಹರ್ಷ ತಂದಿದ್ದಾನೆ.
ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅರಣ್ಯ ಸಮೀಪದ ಗ್ರಾಮಗಳಲ್ಲಿ ಭಾರೀ ವರ್ಷಧಾರೆಯಾಗಿದೆ. ನಿನ್ನೆ ಕೊಡಗು ಜಿಲ್ಲೆಯ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿತ್ತು. ಇನ್ನು, ಈ ಬಾರಿ ಮುಂಗಾರು ಮುನ್ನೋಟ ಚೆನ್ನಾಗಿದ್ದು, ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Advertisement