For the best experience, open
https://m.bcsuddi.com
on your mobile browser.
Advertisement

'ಯಾರು ಏನೆಲ್ಲಾ ಮಾಡಿದ್ದಾರೆ, ಎಲ್ಲವನ್ನು ದೇವರು ನೋಡಿಕೊಳ್ಳುವರು'- ಡಿಕೆ ಸುರೇಶ್‌ ಕಣ್ಣೀರು!

03:22 PM Jun 10, 2024 IST | Bcsuddi
 ಯಾರು ಏನೆಲ್ಲಾ ಮಾಡಿದ್ದಾರೆ  ಎಲ್ಲವನ್ನು ದೇವರು ನೋಡಿಕೊಳ್ಳುವರು   ಡಿಕೆ ಸುರೇಶ್‌ ಕಣ್ಣೀರು
Advertisement

ರಾಮನಗರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಡಿಕೆ ಸುರೇಶ್ ಅವರಿಗೆ ಸೋಲಾಗಿದೆ. ಈ ಹಿನ್ನೆಲೆಯಲ್ಲಿ ಆತ್ಮಾವಲೋಕನ ಸಭೆ ನಡೆಸಲಾಯಿತು. ಈ ಸಭೆ ಮಾಜಿ ಸಂಸದರು ಭಾವುಕರಾಗಿ ಮಾತನಾಡಿದ್ದಾರೆ.

ಕನಕಪುರದ ಡಿಕೆ ಶಿವಕುಮಾರ್ ನಿವಾಸದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ ಡಿಕೆ ಸುರೇಶ್ ಕಣ್ಣೀರು ಸುರಿಸಿದ್ದಾರೆ. ಸೋತಿದ್ದೀನಿ ಅಂತಾ ಸುಮ್ನೆ ಕೂರುವುದಿಲ್ಲ. ನಿಮ್ಮೆಲ್ಲರಿಗೂ ಒಂದು ಕೊರಗಿತ್ತು. ನಿಮ್ಮ ಮನೆಗೆ ಬರಲ್ಲ ಅಂತಿದ್ರೀ, ಇನ್ಮುಂದೆ ನಿಮ್ಮ ಮನೆಗೂ ಬರುತ್ತೇನೆ ನಿಮ್ಮ ಬೀದಿಗೂ ಬರುತ್ತೇನೆ ಎಲ್ಲಾ ಕೆಲಸ ಕಾರ್ಯಗಳನ್ನು ನಿಮ್ಮ ಜೊತೆಯಲ್ಲಿ ಎಂದು ಬೇಸರದಿಂದ ಮಾತನಾಡಿದ್ದಾರೆ.

ನಾನು ಬದುಕಬೇಕು, ಬಾಳಬೇಕು ನನ್ನ ಕೆಲಸಾನೂ ನೋಡಬೇಕು. ಅದೆಲ್ಲದರ ಜೊತೆ ನಿಮ್ಮ ಕೆಲಸವನ್ನೂ ಮಾಡ್ತೀನಿ. ಧೈರ್ಯವಾಗಿರಿ ಯಾರಿಗೂ ಹೇದರಿಕೊಳ್ಳಬೇಡಿ. ಯಾರು ಯಾರು ಏನೆಲ್ಲಾ ಮಾಡಿದ್ದಾರೆ, ಅದೆಲ್ಲವನ್ನೂ ದೇವರು ನೋಡ್ಕೊತಾನೆ ಎಂದು ಡಿಕೆ ಸುರೇಶ್ ಹೇಳಿದರು.

Advertisement

ಈ ಬಾರಿ ಲೋಕಸಭೆ ಚುನಾವಣೆ ಮೂಲಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಡಿ.ಕೆ.ಸುರೇಶ್‍ಗೆ ನಿರಾಸೆಯಾಗಿದೆ.

Author Image

Advertisement