For the best experience, open
https://m.bcsuddi.com
on your mobile browser.
Advertisement

ಮೂಡಿಗೆರೆ -ಕಾಡಾನೆಗಳ ಸೆರೆಗೆ ಇಂದಿನಿಂದ ಕಾರ್ಯಾಚರಣೆ

01:32 PM Nov 25, 2023 IST | Bcsuddi
ಮೂಡಿಗೆರೆ  ಕಾಡಾನೆಗಳ ಸೆರೆಗೆ ಇಂದಿನಿಂದ ಕಾರ್ಯಾಚರಣೆ
Advertisement

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನಲ್ಲಿ ಕೃಷಿಕರ ಪಾಲಿಗೆ ಸಿಂಹ ಸ್ವಪ್ನವಾಗಿರುವ ಕಾಡಾನೆಯನ್ನು ಸೆರೆ ಹಿಡಿಯುಲು ಆದೇಶ ಹೊರಡಿಸಲಾಗಿದೆ.

ಮಲೆನಾಡಲ್ಲಿ ಮೂರು ಕಾಡಾನೆಗಳನ್ನು ಹಿಡಿಯಲು ಆದೇಶ ನೀಡಿದ್ದುಇಂದಿನಿಂದಲೇ ಕಾರ್ಯಾಚರಣೆ ಆರಂಭಗೊಳ್ಳಲಿದೆ.ಈಗಾಗಲೇ ಮಲೆನಾಡ ಭಾಗದಲ್ಲಿ ಒಂಟಿ ಸಲಗ ಮೂರನ್ನು ಬಲಿ ತೆಗೆದುಕೊಂಡಿದೆ
ನಿರಂತರ ಕಾಡಾನೆ ದಾಳಿಯಿಂದ ಜನ ತತ್ತರಿಸಿ ಹೋಗಿದ್ದು ಕೃಷಿ ಚಟುವಟಿಕೆಗಳಿಗೂ ಹಿನ್ನಡೆ ಉಂಟಾಗಿದೆ.

ಜನರ ಆಕ್ರೋಶ, ಪ್ರತಿಭಟನೆ ಹಿನ್ನೆಲೆಯಲ್ಲಿ ಆನೆ ಸೆರೆಹಿಡಿಯಲು ಆದೇಶ ಹೊರಡಿಸಿದ್ದುಪುಂಡಾನೆಗಳನ್ನು ಸೆರೆಹಿಡಿದು ರೆಡಿಯೋ ಕಾಲರಿಂಗ್ ಅಳವಡಿಸಲು ಸೂಚನೆ ಕೊಡಲಾಗಿದೆ. ಸೆರೆ ಹಿಡಿದ ಆನೆಗಳನ್ನು ಭದ್ರಾ ಸಂರಕ್ಷಿತಾ ಪ್ರದೇಶಕ್ಕೆ ಸ್ಥಳಾಂತರಿಸಲು ಆದೇಶ ನೀಡಲಾಗಿದೆ

Advertisement

Author Image

Advertisement