ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮಹಿಳೆಯ ಮೇಲೆ ಕರಡಿಗಳ ದಾಳಿ

02:59 PM Dec 24, 2023 IST | Bcsuddi
Advertisement

ಚಿತ್ರದುರ್ಗ:ಹಾಲು ಕರೆಯಲು ತೆರಳುತ್ತಿದ್ದ ಮಹಿಳೆಯೊಬ್ಬರ ಮೇಲೆ ಮೂರು ಕರಡಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದು ಗಂಭೀರವಾಗಿ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲಾದ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಎಂಬಲ್ಲಿ ನಡೆದಿದೆ.

Advertisement

ಮಂಜುಳಮ್ಮ (60) ಕರಡಿ ದಾಳಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾದ ಮಹಿಳೆಯಾಗಿದ್ದಾರೆ.
ಸದ್ಯ ಗಂಭೀರವಾಗಿ ಗಾಯಗೊಂಡಿರುವ ಇವರನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ತಿಳಿದು ಬಂದಿದೆ.

ಗ್ರಾಮದ ಹೊರವಲಯ ಜಮೀನಿನಲ್ಲಿ ಹಾಲು ಕರೆಯಲು ಹೋದ ಮಂಜಳಮ್ಮರಿಗೆ ಕರಡಿಗಳು ಏಕಾಏಕಿ ಮಾರಾಣಾಂತಿಕ ದಾಳಿ ನಡೆಸಿ ತಲೆ, ಕೈಕಾಲು ಕಿತ್ತು ಗಾಯಗೊಳಿಸಿವೆ.
ದಾಳಿ ವೇಳೆ ಕೂಗಿಕೊಂಡ ಮಂಜಮ್ಮನ ರಕ್ಷಣೆಗೆ ಪತಿ ಮುಂದಾಗಿದ್ದು, ಕರಡಿಗಳಿಗೆ ಕಲ್ಲು ದೊಣ್ಣೆಗಳಿಂದ ಹೊಡೆದು ಪತ್ನಿಯನ್ನು ರಕ್ಷಿಸಿಕೊಂಡಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement
Next Article