ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮಗು ಮಾಡಿಕೊಳ್ಳುವ ವಿಚಾರವೇ ಡಿವೋರ್ಸ್‌ಗೆ ಕಾರಣ?: ಚಂದು ನಿವಿ ದಾಂಪತ್ಯ ಜೀವನ ಅಂತ್ಯ

10:20 AM Jun 08, 2024 IST | Bcsuddi
Advertisement

ಕಿರುತೆರೆಯ ಸ್ಟಾರ್ ಜೋಡಿ, ಬಿಗ್ ಬಾಸ್ ವಿಜೇತ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಪರಸ್ಪರ ಒಪ್ಪಿಗೆ ಮೇರೆಗೆ ಇಂದು ಬೆಂಗಳೂರಿನ ಶಾಂತಿನಗರದಲ್ಲಿರುವ ಫ್ಯಾಮಿಲಿ ಕೋರ್ಟ್‌ನಲ್ಲಿ ವಿಚ್ಚೇದನ ಪಡೆದಿದ್ದಾರೆ. ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರಿಗೆ ಫ್ಯಾಮಿಲಿ ಕೋರ್ಟ್​ ವಿಚ್ಛೇದನ ಮಂಜೂರು ಮಾಡಿದೆ. ಅಷ್ಟಕ್ಕೂ ಈ ದಂಪತಿಯ ನಡುವೆ ಕಿರಿಕ್​ ಆಗಿದ್ದು ಯಾಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ.

Advertisement

ಆ ಬಗ್ಗೆ ಮಾಹಿತಿ ಕೇಳಿಬಂದಿದೆ. ಮಗು ಪಡೆಯುವ ವಿಚಾರಕ್ಕೆ ಚಂದನ್​ ಶೆಟ್ಟಿ ಹಾಗೂ ನಿವೇದಿತಾ ಗೌಡ ನಡುವೆ ಮನಸ್ತಾಪ ಆಗಿದೆ ಎನ್ನಲಾಗಿದೆ. ಚಂದನ್‌ ಮಗು ಪಡೆಯೋ ಬಗ್ಗೆ ಆಸಕ್ತಿ ಇಟ್ಟುಕೊಂಡಿದ್ದ. ಆದ್ರೆ ನಿವೇದಿತಾಗೆ ತಾಯಿ ಆಗೋ ಆಸೆ ಇರಲಿಲ್ಲ. ಬಣ್ಣದ ಜಗತ್ತಿಗೆ ಬರೋ ಆಸಕ್ತಿ ಹೆಚ್ಚಿಸಿಕೊಂಡಿದ್ದ ನಿವೇದಿತಾ ಮಗು ಬೇಡ ಎಂದು ಚಂದನ್ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ. ಮಗು ಆದ್ರೆ ಸಿನಿಮಾ ಕರಿಯರ್ ಕಟ್ಟಿಕೊಳ್ಳೋದು ಕಷ್ಟ ಅನ್ನೋ ಕಾರಣಕ್ಕೆ ಇಬ್ಬರು ದೂರಾಗಿದ್ದಾರೆ ಎನ್ನುವ ಮಾತು ಸಾಮಾನ್ಯವಾಗಿದೆ.

ಯಾವುದೇ ಕಿತ್ತಾಟ ಇಲ್ಲದೆ ಇಬ್ಬರು ಒಪ್ಪಿಕೊಂಡು ವಿಚ್ಛೇಧನಕ್ಕೆ ಮುಂದಾಗಿದ್ದಾರೆ ಅನ್ನೋ ಮಾಹಿತಿ ಇದೆ. ಆದರೆ ಈ ಬಗ್ಗೆ ಚಂದನ್ ಆಗಲಿ. ನಿವೇದಿತಾ ಆಗಲಿ ಕಾರಣ ನೀಡಿಲ್ಲ. ಒಂದೇ ದಿನದಲ್ಲಿ ವಿಚ್ಚೇದನ ಪಡೆದ ದಂಪತಿ!: ಮಿಡಿಯೇಷನ್ ನಲ್ಲಿ ವಿಚ್ಚೇದನಕ್ಕೆ ಇಬ್ಬರೂ ಪರಸ್ಪರ ಒಪ್ಪಿಗೆ ಸೂಚಿಸಿದ್ದು, ಚಂದನ್ ಶೆಟ್ಟಿ ಹಾಗೂ ನಿವೇದಿತಾ 2 ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯಕ್ಕೆ ಆಗಮಿಸಿದ್ದರು. 13b of family court act ಅಡಿ ಒಪ್ಪಿಗೆ ಸೂಚಿಸಿದ್ದು, ಯಾರೊಬ್ಬರ ಮೇಲೂ ಯಾವುದೇ ಆರೋಪ ಮಾಡದೇ ಒಪ್ಪಿಗೆ ಮೇರೆಗೆ ಸಂಧಾನಕಾರರು ಅಗ್ರಿಮೆಂಟ್ ಮಾಡಿದ್ದಾರೆ. ಅಗ್ರಿಮೆಂಟ್ ಸಮೇತ ಇಬ್ಬರೂ ಕೂಡ ಕೋರ್ಟ್ ‌ಮುಂದೆ ಬಂದಿದ್ದು, ಅಗ್ರಿಮೆಂಟ್ ಆಧರಿಸಿ ಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ. ಇಬ್ಬರೂ ಅಗ್ರಿಮೆಂಟ್ ಪ್ರಕಾರ ಕೋರ್ಟ್ ‌ಮುಂದೆ ಹೇಳಿಕೆ ನೀಡಿ ವಿಚ್ಚೇದನ ಮಂಜೂರಾಗಿದೆ.

Advertisement
Next Article