For the best experience, open
https://m.bcsuddi.com
on your mobile browser.
Advertisement

ಮಂಡ್ಯ: ಹಳ್ಳಕ್ಕೆ ಉರುಳಿ ಬಿದ್ದ ಕಾರು - ಮೂವರು ಯುವಕರ ದುರ್ಮರಣ

02:24 PM Feb 04, 2024 IST | Bcsuddi
ಮಂಡ್ಯ  ಹಳ್ಳಕ್ಕೆ ಉರುಳಿ ಬಿದ್ದ ಕಾರು   ಮೂವರು ಯುವಕರ ದುರ್ಮರಣ
Advertisement

ಮಂಡ್ಯ: ರಸ್ತೆ ಬದಿಯ ಹಳ್ಳಕ್ಕೆ ಕಾರು ಉರುಳಿ ಬಿದ್ದು ಮೂವರು ಯುವಕರು ದುರ್ಮರಣಕ್ಕೀಡಾಗಿರುವ ಘಟನೆ ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕಿನ ಅಕ್ಕಿ ಹೆಬ್ಬಾಳು ಬಳಿ ನಡೆದಿದೆ. ಕೆ.ಆರ್ ಪೇಟೆ ಪಟ್ಟಣದ ಅನಿಚಿತ್, ಪವನ್ ಶೆಟ್ಟಿ ಹಾಗೂ ಚಿರು ಮೃತ ದುರ್ದೈವಿಗಳು. ಶನಿವಾರ ರಾತ್ರಿ ಮೂವರೂ ಹೋಂಡಾ ಸಿಟಿ ಕಾರಿನಲ್ಲಿ ಕೆ ಆರ್ ಪೇಟೆ - ಭೇರ್ಯ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ಅಕ್ಕಿ ಹೆಬ್ಬಾಳು ಸೇತುವೆ ಬಳಿ ನಿಯಂತ್ರಣ ತಪ್ಪಿದ ಕಾರು ಹಳ್ಳಕ್ಕೆ ಉರುಳಿ ಬಿದ್ದಿದೆ. ತಕ್ಷಣ ಸ್ಥಳೀಯರು ರಕ್ಷಣೆಗೆ ಮುಂದಾದರಾದರೂ ತೀವ್ರ ಗಾಯಗೊಂಡಿದ್ದ ಮೂವರು ಕೂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಕೆ.ಆರ್ ಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಮೂವರು ಯುವಕರು ಅಪಘಾತ ನಡೆದ ಸ್ಥಳದಲ್ಲಿ ಶೋಕ ಮಡುಗಟ್ಟಿದ್ದು, ಮೃತರ ಮನೆಯವರ ಆಕ್ರಂದನ ಕರಳು ಹಿಂಡುವಂತಿತ್ತು.

Author Image

Advertisement