ಭೂ ದಾಖಲೆಗಳ ಉಪನಿರ್ದೇಶಕರ ಕಚೇರಿಯ ಮೇಲೆ ಲೋಕಾಯುಕ್ತ ದಾಳಿ
10:50 AM Jul 30, 2024 IST | BC Suddi
Advertisement
ಕಲಬುರಗಿ : ಲಂಚ ಸ್ವೀಕರಿಸುತ್ತಿದ್ದಾಗಲೇ ಜಿಲ್ಲಾ ಭೂ ದಾಖಲೆಗಳ ಉಪನಿರ್ದೇಶಕ ಪ್ರವೀಣ್ ಜಾಧವ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಭೂ ದಾಖಲೆಗಳ ಉಪನಿರ್ದೇಶಕ.ಪ್ರವೀಣ್ ಜಾಧವ್ ಹಾಗೂ ಸರ್ವೇಯರ್ ಶರಣಾಗೌಡ ಲಂಚ ಸ್ವೀಕರಿಸುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಗಿ ಬಿದ್ದಿದ್ದಾರೆ.
Advertisement
ರೇವಣಸಿದ್ಧಪ್ಪ ಎನ್ನುವವರ ಹತ್ತಿರ 25 ಗುಂಟೆ ಜಮೀನು ಪೋಡಿ ಸರ್ವೇಗಾಗಿ ಪ್ರವೀಣ್ ಜಾದವ್ ಸುಮಾರು 5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ರೇವಣಸಿದ್ಧಪ್ಪ ದೂರಿನ ಮೇರೆಗೆ ಇದೀಗ ಲೋಕಾಯುಕ್ತ ಅಧಿಕಾರಿಗಳು 1.5 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಪ್ರವೀಣ್ ಜಾದವ್ ಹಾಗೂ ಸರ್ವೇಯರ್ ಶರಣಾಗೌಡ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.