For the best experience, open
https://m.bcsuddi.com
on your mobile browser.
Advertisement

ಭವಾನಿ ರೇವಣ್ಣ ಕಾರು ಚಾಲಕನಿಗೆ ಎಸ್‌ಐಟಿಯಿಂದ ಸಮನ್ಸ್ ಜಾರಿ

07:03 PM May 22, 2024 IST | Bcsuddi
ಭವಾನಿ ರೇವಣ್ಣ ಕಾರು ಚಾಲಕನಿಗೆ ಎಸ್‌ಐಟಿಯಿಂದ ಸಮನ್ಸ್ ಜಾರಿ
Advertisement

ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಣ್ಣ ಪತ್ನಿ ಭವಾನಿ ಕಾರು ಚಾಲಕ ಅಜಿತ್ ಗೆ ಎಸ್‌ಐಟಿ ಪೊಲೀಸರಿಂದ ಸಮನ್ಸ್ ಜಾರಿ ಮಾಡಲಾಗಿದೆ.

ಸಂತ್ರಸ್ತೆಯನ್ನು ಚಾಲಕ ಅಜಿತ್ ಕಾರಿನಲ್ಲಿ ಕರೆದೊಯ್ದಿದ್ದ ಆರೋಪ ಕೇಳಿಬಂದಿದ್ದು ಹೀಗಾಗಿ ಸಂತ್ರಸ್ತೆಯ ಅಪಹರಣ ಪ್ರಕರಣ ಸಂಬಂಧ ಎಸ್‌ಐಟಿ ಈಗಾಗಲೇ 2 ಬಾರಿ ಸಮನ್ಸ್ ನೀಡಿದೆ. ಆದರೆ ಅಜಿತ್ ಅಪಹರಣ ಪ್ರಕರಣ ದಾಖಲಾದ ಬಳಿಕ ಪರಾರಿಯಾಗಿದ್ದಾನೆ.

ಪತಿ ರೇವಣ್ಣ ಹಾಗೂ ಪುತ್ರ ಪ್ರಜ್ವಲ್ ವಿರುದ್ಧ ದಾಖಲಾದ ಪ್ರಕರಣದಿಂದಾಗಿ ಭವಾನಿಗೂ ಸಂಕಷ್ಟ ಎದುರಾಗಿದೆ. ಲೈಂಗಿಕ ಕಿರುಕುಳ ಹಾಗೂ ಅಪಹರಣ ಈ ಎರಡೂ ಪ್ರಕರಣದಲ್ಲೂ ಭವಾನಿ ರೇವಣ್ಣ ಹೆಸರು ಉಲ್ಲೇಖವಾಗಿದೆ. ಭವಾನಿ ಕರೆದರು ಎಂದು ಮಹಿಳೆಯನ್ನು ಅಪಹರಣ ಮಾಡಿರುವುದಾಗಿ ಆರೋಪಿಸಲಾಗಿದೆ. ಇನ್ನು ಭವಾನಿ ವಿರುದ್ಧ ಪ್ರಕರಣ ಸಂಬಂಧ ಸಾಕ್ಷಿಗಳೇನಾದರೂ ದೊರೆತರೆ ಅವರಿಗೂ ಸಂಕಷ್ಟ ಎದುರಾಗಲಿದೆ.

Advertisement

Author Image

Advertisement