For the best experience, open
https://m.bcsuddi.com
on your mobile browser.
Advertisement

ಭಟ್ಕಳದಲ್ಲಿ ಶಂಕಿತ ಉಗ್ರನಿಗಾಗಿ ಮಹಾರಾಷ್ಟ್ರ ಎಟಿಎಸ್ ತಂಡದಿಂದ ಶೋಧ

03:04 PM Jun 21, 2024 IST | Bcsuddi
ಭಟ್ಕಳದಲ್ಲಿ ಶಂಕಿತ ಉಗ್ರನಿಗಾಗಿ ಮಹಾರಾಷ್ಟ್ರ ಎಟಿಎಸ್ ತಂಡದಿಂದ ಶೋಧ
Advertisement

ಕಾರವಾರ: ಪುಣೆಯಲ್ಲಿ ನಡೆದ ಉಗ್ರ ಕೃತ್ಯದ ಆರೋಪಿಗಾಗಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ವು ಭಟ್ಕಳದಲ್ಲಿ ಶೋಧ ನಡೆಸಿದೆ.

ಭಟ್ಕಳದ ನವಾಯತ್ ಕಾಲೋನಿಯ ಹಾಜಿ ಮಂಜಿಲ್ ನಿವಾಸಿ ಅಬ್ದುಲ್ ಕಬೀರ್ ಸುಲ್ತಾನ್ ಅಲಿಯಾಸ್ ಮೌಲಾನ ಸುಲ್ತಾನ್ ಎಂಬಾತನಿಗಾಗಿ ಎಟಿಎಸ್ ಹುಡುಕಾಟ ನಡೆಸಲಾಗಿದೆ. ಈತ ಪುಣೆಯಲ್ಲಿ ನಡೆದ ಉಗ್ರ ಕೃತ್ಯದ ಆರೋಪಿಯಾಗಿದ್ದು, ಕಳೆದೊಂದು ವರ್ಷದಿಂದ ತಲೆಮರೆಸಿಕೊಂಡಿದ್ದಾನೆ.

ಶಂಕಿತ ಉಗ್ರ ಕಬೀರ್ ಸುಲ್ತಾನ್ ನನ್ನು ಬಂಧಿಸಿ ವಿಚಾರಣೆಗೆ ಹಾಜರುಪಡಿಸುವಂತೆ ಮಹಾರಾಷ್ಟ್ರ ಕೋರ್ಟ್ ಸೂಚಿಸಿದೆ. ಈ ಹಿನ್ನೆಲೆ ಎಟಿಎಸ್ ತಂಡ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದೆ. ಭಟ್ಕಳದಲ್ಲಿನ ಶಂಕಿತ ಉಗ್ರ ಕಬೀರ್ ಸುಲ್ತಾನ್ ನಿವಾಸಕ್ಕೆ ಎಟಿಎಸ್ ಅಧಿಕಾರಿಗಳು ನೋಟಿಸ್ ಅಂಟಿಸಿದ್ದಾರೆ. ಎಟಿಎಸ್ ಅಧಿಕಾರಿಗಳು ಆರೋಪಿಯ ಬಂಧನಕ್ಕೆ ಉತ್ತರ ಕನ್ನಡ ಪೊಲೀಸರ ಸಹಕಾರ ಕೋರಿದ್ದಾರೆ.

Advertisement

Author Image

Advertisement