For the best experience, open
https://m.bcsuddi.com
on your mobile browser.
Advertisement

ಬೆಳಗಾವಿ : ಸದನದಲ್ಲಿ ಗದ್ದಲ ಗಲಾಟೆ - ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆಕ್ರೋಶ

03:07 PM Dec 05, 2023 IST | Bcsuddi
ಬೆಳಗಾವಿ   ಸದನದಲ್ಲಿ ಗದ್ದಲ ಗಲಾಟೆ   ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆಕ್ರೋಶ
Advertisement

ಬೆಳಗಾವಿ : ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಎರಡನೇ ದಿನಕ್ಕೆ ಕಾಲಿಟ್ಟಿದೆ. ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದ ಹಾಗೆ ಸದನದಲ್ಲಿ ಗದ್ದಲ ಗಲಾಟೆ ಶುರುವಾಯಿತು. ಬರಗಾಲ ವಿಚಾರವಾಗಿ ಚರ್ಚೆಗೆ ನೀಡಬೇಕೆಂದು ವಿಪಕ್ಷ ನಾಯಕರ ನೇತೃತ್ವದಲ್ಲಿ ಸದಸ್ಯರು ಗದ್ದಲ ಎಬ್ಬಿಸಿದರು. ಬರಗಾಲದ ಚರ್ಚೆ ವೇಳೆ ಸಿಎಂ ಮತ್ತು ಸಚಿವರ ಗೈರು ಆಗಿದ್ದನ್ನ ಕಂಡು ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ನಾಲ್ಕೈದು ಸಚಿವರು ಇದ್ದಾರೆ, ಚರ್ಚೆ ಆರಂಭವಾದ ಕೂಡಲೇ ಎಲ್ಲ ಸಚಿವರು ಬರ್ತಾರೆ ಎಂದು ಸಿಎಂ ಸಮಜಾಯಿಸಿ ಉತ್ತರ ನೀಡಿದರು.

Author Image

Advertisement