ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬೆಳಗಾವಿ : ಮಂತ್ರಿಗಳೆಲ್ಲ ತೆಲಂಗಾಣಕ್ಕೆ ಹೋಗಿ ಅಲ್ಲಿನ ಎಂಎಲ್‌ಎ ಗಳ ಸೇವೆ ಮಾಡ್ತಿದ್ದಾರೆ - ವಿಪಕ್ಷ ನಾಯಕ ಆರ್ ಅಶೋಕ ಕಿಡಿ

06:46 PM Dec 06, 2023 IST | Bcsuddi
Advertisement

ಬೆಳಗಾವಿ : ರಾಜ್ಯದ ಮಂತ್ರಿಗಳೆಲ್ಲ ತೆಲಂಗಾಣಕ್ಕೆ ಹೋಗಿ ಅಲ್ಲಿನ ಎಂಎಲ್‌ಎ ಗಳ ಸೇವೆ ಮಾಡ್ತಿದ್ದಾರೆ ಅಂತಾ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ ಕಿಡಿ ಕಾರಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಬರಗಾಲದ ಬಗ್ಗೆ ಹಾಗೂ ಸಂಕಷ್ಟದಲ್ಲಿರುವ ರೈತರಿಗೆ ಸಾಂತ್ವನ ಹೇಳಲು ತೆರಳಬೇಕಿತ್ತು. ಇಲ್ಲಿಗೆ ಬಂದು ಸರ್ಕಾರ ಏನು ಮಾಡಿದೆ ಅಂತ‌ ಹೇಳಬೇಕಿತ್ತು. ಆದರೆ, ಯಾವ ಮಂತ್ರಿಗಳೂ ಸಹ ಸದನಕ್ಕೆ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಎಲ್ಲಾ ರಾಜ್ಯಗಳಲ್ಲೂ ಸೋತಿದ್ದಾರೆ. ತೆಲಂಗಾಣ ಒಂದೇ ರಾಜ್ಯದಲ್ಲಿ ಗೆದ್ದಿದ್ದಾರೆ. ಎಲ್ಲರೂ ತೆಲಂಗಾಣದಲ್ಲಿ ಕೂತಿದ್ದಾರೆ. ಮರ್ಯಾದೆ ಇಲ್ಲಿ ಹೋಗುತ್ತೆ ಅಂತ ಅಲ್ಲಿಗೆ ಹೋಗಿ ಕೂತಿದ್ದಾರೆ. ಸಿಎಂ ಮಂತ್ರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಕರ್ನಾಟಕದ ಜನ ಇಲ್ಲಿ‌ ಸಂಕಷ್ಟದಲ್ಲಿರುವಾಗ ಮೋಜು ಮಸ್ತಿ ಮಾಡೋದು ಸರಿಯಲ್ಲ. ಇದು ನಾಚಿಗೇಡಿತನ ಕೂಡಲೇ ಅವರೆಲ್ಲರನ್ನೂ ವಾಪಾಸ್ ಕರೆಸಬೇಕು ಅಂತಾ ಕಿಡಿ ಕಾರಿದರು.

Advertisement
Next Article