For the best experience, open
https://m.bcsuddi.com
on your mobile browser.
Advertisement

ಬೆಂಗಳೂರು: 10 ವರ್ಷಗಳ ಹಿಂದೆಯೇ ಬಾಬಾ ರಾಮ್ ದೇವ್ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದೆ - ಡಾ.ಆಂಜಿನಪ್ಪ

04:59 PM Apr 05, 2024 IST | Bcsuddi
ಬೆಂಗಳೂರು  10 ವರ್ಷಗಳ ಹಿಂದೆಯೇ ಬಾಬಾ ರಾಮ್ ದೇವ್ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದೆ   ಡಾ ಆಂಜಿನಪ್ಪ
Advertisement

ಬೆಂಗಳೂರು : ಯೋಗ ಗುರು ಬಾಬಾ ರಾಮ್ ದೇವ್ ಪತಂಜಲಿ ಆರ್ಯುವೇದ ಕಂಪನಿಯ ಜಾಹೀರಾತು ಮೂಲಕ ಜನರ ದಾರಿ ತಪ್ಪಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ ಮತ್ತು ದೇಶದ ಉನ್ನತ ನ್ಯಾಯಾಲಯದ ಕ್ರಮವನ್ನು ಎದುರಿಸಲು ಸಿದ್ಧರಾಗಿ ಎಂದು ಹೇಳಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಖ್ಯಾತ ವೈದ್ಯರಾದ ಡಾ.ಅಂಜಿನಪ್ಪನವರು ಬಾಬಾ ರಾಮ್ ದೇವ್ ಒಬ್ಬ ವಂಚಕ, ಕಾನ್ಸರ್ ಗುಣಪಡಿಸುತ್ತೇನೆಂದು 10 ಸಾವಿರ ಕೋಟಿ ಹಣವನ್ನ ವಂಚಿಸಿದ್ದಾನೆಂದು ಹೇಳಿದ್ರು. ದೊಡ್ಡಬಳ್ಳಾಪುರ ತಾಲೂಕಿನ ಮಜರಾಹೋಸಹಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಾಬಾ ರಾಮ್ ದೇವ್ ಒಬ್ಬ ವಂಚಕ.

ಬಾಬಾ ರಾಮ್ ದೇವ್ ಒಬ್ಬ ಯೋಗಗುರುವಾಗಿ ನನಗೆ ಗೌರವ ಇದೆ, ಅವರ ಕಾಲಿಗೂ ಬಿದ್ದು ನಮಸ್ಕಾರ ಮಾಡುವೆ, ಆದರೆ ಕಾನ್ಸರ್ ಗುಣಪಡಿಸುತ್ತೆನೆಂದು 10 ಸಾವಿರ ಕೋಟಿ ಮಾಡಿ ದೇಶಕ್ಕೆ ವಂಚನೆ ಎಸಗಿದ್ದಾನೆ, 10 ವರ್ಷಗಳ ಹಿಂದೆ ಆತನ ವಿರುದ್ಧ ಪ್ರಕರಣ ದಾಖಲು ಮಾಡುವಂತೆ ಒತ್ತಾಯಿಸಿದ್ದೆ. ವಂಚನೆಗೆ ಸಂಬಂಧಿಸಿದಂತೆ ಈಗ ಅವನ ವಿರುದ್ಧ ಪ್ರಕರಣ ದಾಖಲಾಗಿದೆ.

Advertisement

ನಾನು ಕರ್ನಾಟಕ ರಾಜ್ಯ ಕಾನ್ಸರ್ ಸೊಸೈಟ್ ಛೇರ್ಮನ್, ಸಾಕಷ್ಟು ಕಾನ್ಸರ್ ರೋಗಿಗಳನ್ನ ಗುಣ ಪಡಿಸಿದ್ದೇನೆ, ಶೀಘ್ರ ಪತ್ತೆ ಕಾನ್ಸರ್ ನಾಪತ್ತೆ ಅನ್ನುವಂತೆ ಕಾನ್ಸರ್ ರೋಗಿಗಳು ಬೇಗ ವೈದ್ಯರ ಬಳಿ ಬರುವುದರಿಂದ ಗುಣಮುಖರಾಗುತ್ತಾರೆ, ಆದರೆ ಬಾಬಾ ರಾಮ್ ದೇವ್ ಕಾನ್ಸರ್ ಗುಣಪಡಿಸುವುದಾಗಿ ಜಾಹೀರಾತು ನೀಡಿದ್ರು, ಜನರು ನಂಬಿ ಮೆಡಿಸನ್ ತಗೊಂಡ್ರು, ಇದರಿಂದ ಕಾನ್ಸರ್ ರೋಗಿಗಳು ಸ್ಟೇಜ್ 1 ರಲ್ಲಿ ಬರಬೇಕಿದ್ದ ರೋಗಿಗಳು ಸ್ಟೇಜ್ 4 ರಲ್ಲಿ ಇರುವಾಗ ಬರುತ್ತಾರೆ, ಇದರಿಂದ ಕಾನ್ಸರ್ ರೋಗ ಗುಣಪಡಿಸಲು ಸಾಧ್ಯವಿಲ್ಲ ಎಂದರು.

Author Image

Advertisement