For the best experience, open
https://m.bcsuddi.com
on your mobile browser.
Advertisement

ಬೆಂಗಳೂರು: ಸ್ಟಾರ್ ನಿರ್ದೇಶಕ ಆರ್ ಚಂದ್ರುಗೆ ಮತ್ತೆ ಸಂಕಷ್ಟ

03:05 PM Apr 21, 2024 IST | Bcsuddi
ಬೆಂಗಳೂರು  ಸ್ಟಾರ್ ನಿರ್ದೇಶಕ ಆರ್ ಚಂದ್ರುಗೆ ಮತ್ತೆ ಸಂಕಷ್ಟ
Advertisement

ಬೆಂಗಳೂರು: 85 ಲಕ್ಷ ಹಣ ಪಡೆದು ವಾಪಸ್ ನೀಡದ ಪ್ರಕರಣದಲ್ಲಿ ಖ್ಯಾತ ನಿರ್ದೇಶಕ ಆರ್ ಚಂದ್ರುಗೆ 55 ಲಕ್ಷ ಬ್ಯಾಂಕ್ ಗ್ಯಾರೆಂಟಿ ಒದಗಿಸುವಂತೆ ಕೋರ್ಟ್ ಸೂಚನೆ ನೀಡಿದೆ. 2019ರಲ್ಲಿ ಬಸವರಾಜು ಎಂಬುವರು ಆರ್ ಚಂದ್ರು 85 ಲಕ್ಷ ಹಣ ಪಡೆದು ವಾಪಸ್ ನೀಡಿಲ್ಲ ಎಂದು ಕೋರ್ಟ್ ನಲ್ಲಿ ಪ್ರಕರಣ ದಾಖಲು ಮಾಡಿದ್ದರು. ಈ ವೇಳೆ ಆರ್ ಚಂದ್ರು 55 ಲಕ್ಷದ ಬ್ಯಾಂಕ್ ಗ್ಯಾರೆಂಟಿಯನ್ನು ದೂರುದಾರರಿಗೆ ನಿರ್ದೇಶಕ ಚಂದ್ರು ನೀಡಿದ್ದರು. ಸದ್ಯ ಗ್ಯಾರಂಟಿ ಅವಧಿ ಮುಕ್ತಾಯ ಆಗಿರುವ ಕಾರಣ ಚಂದ್ರುಗೆ ಪುನಃ ಬ್ಯಾಂಕ್ ಗ್ಯಾರೆಂಟಿ ನೀಡುವಂತೆ ಕೋರ್ಟ್ ಸೂಚನೆ ನೀಡಿದೆ. 23 ನೇ ಸಿಸಿಹೆಚ್ ನ್ಯಾಯಾಲಯ ಸೂಚನೆ ನೀಡಿ ಪ್ರಕರಣವನ್ನ ಜೂನ್ ಒಂದಕ್ಕೆ ಮುಂದೂಡಿದೆ.

Author Image

Advertisement