ಬೆಂಗಳೂರು: 'ಸಾಕಪ್ಪ ಸಾಕು ಜೈಲೂಟ' ಅಂತ ಹೈಕೋರ್ಟ್ಗೆ ಮನವಿ ಸಲ್ಲಿಸಿದ ದರ್ಶನ್..!
01:37 PM Jul 09, 2024 IST
|
Bcsuddi
Advertisement
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಸದ್ಯ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್, ಸಾಕಪ್ಪ ಸಾಕು ಜೈಲೂಟ ಎಂದು ಈಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ದರ್ಶನ್ ಅವರು ಹೇಳಿ, ಕೇಳಿ ನಾನ್ ವೆಜ್ ಪ್ರಿಯರು. ಆದರೆ ಜೈಲಿನಲ್ಲಿ ಸಿಗುವ ಊಟಕ್ಕೆ ದರ್ಶನ್ ಅಡ್ಜೆಸ್ಟ್ ಆಗೋದು ಕಷ್ಟವಾಗಿದೆ. ಜೊತೆಗೆ ದಿನ ಕಳೆದಂತೆ ದರ್ಶನ್ ಅವರ ದೇಹದ ತೂಕ ಕೂಡ ಕಡಿಮೆ ಆಗುತ್ತಿದೆ. ಈ ಹಿನ್ನೆಲೆ ದರ್ಶನ್ ಪರ ವಕೀಲರು ಜೈಲೂಟ ಬೇಡ, ಮನೆಯಿಂದ ಊಟ, ಹಾಸಿಗೆ, ಪುಸ್ತಕ ಪಡೆಯಲು ಅನುಮತಿ ಕೋರಿ ಹೈಕೋರ್ಟ್ಗೆ ರಿಟ್ ಸಲ್ಲಿಸಿದ್ದಾರೆ. ಈ ಬಗ್ಗೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ದರ್ಶನ್ ಪರ ವಕೀಲರಿಂದ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.
Advertisement
Next Article