For the best experience, open
https://m.bcsuddi.com
on your mobile browser.
Advertisement

ಬೆಂಗಳೂರು: ರಾಹುಲ್ ಗಾಂಧಿ ಜಾಮೀನಿಗೆ ಶ್ಯೂರಿಟಿ ನೀಡಿದ ಡಿಕೆ ಸುರೇಶ್

01:24 PM Jun 07, 2024 IST | Bcsuddi
ಬೆಂಗಳೂರು  ರಾಹುಲ್ ಗಾಂಧಿ ಜಾಮೀನಿಗೆ ಶ್ಯೂರಿಟಿ ನೀಡಿದ ಡಿಕೆ ಸುರೇಶ್
Advertisement

ಬೆಂಗಳೂರು: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಇಂದು ಕಾಂಗ್ರೆಸ್ ನಾಯಕ‌ ರಾಹುಲ್ ಗಾಂಧಿ ಹಾಜರಾಗಿದ್ದಾರೆ. ಮಾನ ನಷ್ಟ ಮೊಕದ್ದಮೆ ಕೇಸ್‌ನಲ್ಲಿ ಇಂದು ನ್ಯಾಯಧೀಶರ ಮುಂದೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ರಾಹುಲ್ ಗಾಂಧಿ ಹಾಜರಾದರು. ರಾಹುಲ್ ಪರ ವಕೀಲರು ನ್ಯಾಯಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಈ ವೇಳೆ ವಿಚಾರಣೆಯನ್ನ ಜೂನ್ 30ಕ್ಕೆ ಮುಂದೂಡಿದ ಕೋರ್ಟ್ ರಾಹುಲ್ ಗಾಂಧಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ರಾಹುಲ್ ಗಾಂಧಿಗೆ ನೀಡಿದ ಡಿಕೆ ಸುರೇಶ್ ಬಾಂಡ್ ಶ್ಯೂರಿಟಿ ನೀಡಿದ್ದು ರಾಹುಲ್ ಗಾಂಧಿಗೆ ಜಾಮೀನು ಮಂಜೂರಾಗಿದೆ. ಕೋರ್ಟ್ ಕಲಾಪದ ವೇಳೆ ನ್ಯಾಯಾಧೀಶರ ಮುಂದೆ ಕೈಕಟ್ಟಿ ನಿಂತಿದ್ದ ರಾಹುಲ್ ಗಾಂಧಿ ಜಾಮೀನು ಸಿಕ್ಕ ಬಳಿಕ ಕೋರ್ಟ್ ನಿಂದ ಹೊರಟಿದ್ದಾರೆ.

Author Image

Advertisement