For the best experience, open
https://m.bcsuddi.com
on your mobile browser.
Advertisement

ಬೆಂಗಳೂರು: ದೇಶ ಆಳುವ ಸಾಮರ್ಥ್ಯ ಇರೋದು ಬಿಜೆಪಿಗೆ ಮಾತ್ರ ಎಂದ ಬಿಎಸ್‌ವೈ

01:18 PM Dec 03, 2023 IST | Bcsuddi
ಬೆಂಗಳೂರು  ದೇಶ ಆಳುವ ಸಾಮರ್ಥ್ಯ ಇರೋದು ಬಿಜೆಪಿಗೆ ಮಾತ್ರ ಎಂದ ಬಿಎಸ್‌ವೈ
Advertisement

ಬೆಂಗಳೂರು: ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ ಬಿಜೆಪಿ ಪಾಳಯದಲ್ಲಿ ಹೊಸ ಉತ್ಸಾಹ ಇಮ್ಮಡಿಗೊಳಿಸಿದೆ. ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಸಾಧಿಸಿದ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಷ್ಟ್ರೀಯ ನಾಯಕ ಬಿ.ಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ನಾಲ್ಕು ರಾಜ್ಯಗಳ ಪೈಕಿ ಮೂರು ರಾಜ್ಯದಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿದ್ದೇವೆ. ಈ ಎಲ್ಲ ಗೆಲುವಿಗೆ ಮೋದಿ, ನಡ್ಡಾ, ಅಮಿತ್ ಶಾ ಕಾರಣ. ಬೇರೆ ಯಾವುದೇ ಪಕ್ಷದಲ್ಲಿ ದೇಶವನ್ನು ಆಳುವ ಸಾಮರ್ಥ್ಯವಿಲ್ಲ. ಲೋಕಸಭಾ‌ ಚುನಾವಣೆಯಲ್ಲಿ ಎಲ್ಲಾ ಸೀಟ್ ಗೆಲ್ತೀವಿ. ನಾನು ಪ್ರವಾಸ ಮಾಡ್ತೀನಿ. ಪಕ್ಷದಲ್ಲಿ ವಿಜಯೇಂದ್ರ ಅಧ್ಯಕ್ಷರಾದ ಮೇಲೆ ಇನ್ನಷ್ಟು ಬಲ ಬಂದಿದೆ. ಕಾಂಗ್ರೆಸ್‌ನ ಧೂಳಿಪಟ ಮಾಡಲಿಕ್ಕೆ ರೆಡಿಯಾಗಿದ್ದೀವಿ. ಲೋಕಾಸಭೆಗೆ ಇದೊಂದು ದೊಡ್ಡ ಉದಾಹರಣೆಯಾಗಲಿದೆ. ಎಲ್ಲಾ ನಾಯಕರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಿಎಸ್‌ವೈ ಹರ್ಷವ್ಯಕ್ತಪಡಿಸಿದ್ದಾರೆ.

Author Image

Advertisement