For the best experience, open
https://m.bcsuddi.com
on your mobile browser.
Advertisement

ಬೆಂಗಳೂರು: ದರ್ಶನ್ ಕೊಲೆ ಪ್ರಕರಣ - ಬಿಬಿಎಂಪಿ ಅಧಿಕಾರಿಗಳಿಗೂ ಸಂಕಷ್ಟ

04:10 PM Jun 21, 2024 IST | Bcsuddi
ಬೆಂಗಳೂರು  ದರ್ಶನ್ ಕೊಲೆ ಪ್ರಕರಣ   ಬಿಬಿಎಂಪಿ ಅಧಿಕಾರಿಗಳಿಗೂ ಸಂಕಷ್ಟ
Advertisement

ಬೆಂಗಳೂರು: ಪಟ್ಟಣಗೆರೆ ಶೆಟ್‌ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣ ಬಿಬಿಎಂಪಿ ಅಧಿಕಾರಿಗಳಿಗೂ ಸಂಕಷ್ಟ ಶುರುವಾಗಿದೆ. ಪ್ರಕರಣದ ಕೇಂದ್ರ ಬಿಂದು ಪಟ್ಟಣಗೆರೆ ಶೆಡ್ ತೆರಿಗೆ ವಂಚನೆ ಮಾಡಲಾಗಿದ್ದು ಬರೋಬ್ಬರಿ 15 ವರ್ಷದಿಂದ ಬಿಬಿಎಂಪಿ ಅಧಿಕಾರಿಗಳು ತೆರಿಗೆ ಕಟ್ಟಿಸಿಕೊಂಡಿಲ್ಲ. ಸದ್ಯ ಬಿಬಿಎಂಪಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್ ನೋಟಿಸ್ ನೀಡಲು ಮುಂದಾಗಿದ್ದಾರೆ. ತೆರಿಗೆ ಕಟ್ಟಿಸಿಕೊಳ್ಳದೇ ಅಧಿಕಾರಿಗಳು ಶಾಮೀಲು ಆಗಿದ್ದಾರಾ ಅನ್ನೋ ಆಯಾಮದಲ್ಲಿ ತನಿಖೆ ನಡೆಸಲು ಮೌಖಿಕ ಸೂಚನೆ ಕೊಡಲಾಗಿದ್ದು೫ ಎಕರೆ ಜಾಗಕ್ಕೆ ಯಾಕೆ ತೆರಿಗೆ ಕಟ್ಟಿಸಿಕೊಂಡಿಲ್ಲ, ಅಧಿಕಾರಿಗಳು ಯಾಕೆ ನಿರ್ಲಕ್ಷ್ಯ ಮಾಡಿದ್ದಾರೆ ಕೂಡಲೇ ವ ರದಿ ಕೊಡುವಂತೆ ಆಡಳಿತಾಧಿಕಾರಿ ಸೂಚನೆ ಕೊಟ್ಟಿದ್ದಾರೆ.

Advertisement
Author Image

Advertisement