For the best experience, open
https://m.bcsuddi.com
on your mobile browser.
Advertisement

ಬೆಂಗಳೂರು: ತರುಣ್ ಸುಧೀರ್ ಮದುವೆಗೆ ಹೋಗ್ತಾರಾ ದರ್ಶನ್..? ಕಾನೂನು ಏನು ಹೇಳುತ್ತೆ..?

10:38 AM Jul 23, 2024 IST | Bcsuddi
ಬೆಂಗಳೂರು  ತರುಣ್ ಸುಧೀರ್ ಮದುವೆಗೆ ಹೋಗ್ತಾರಾ ದರ್ಶನ್    ಕಾನೂನು ಏನು ಹೇಳುತ್ತೆ
Advertisement

ಬೆಂಗಳೂರು: ಮದುವೆ ಡೇಟ್ ಮಾತ್ರ ಮುಂದಕ್ಕೆ ಹಾಕ್ಬೇಡ ನಾನು ಮದುವೆಗೆ ಬರ್ತಿನಿ ಅಂತ ನಿರ್ದೇಶಕ‌ ತರುಣ್ ಸುಧೀರ್‌ಗೆ ದರ್ಶನ್ ಮಾತು ಕೊಟ್ಟಿದ್ದಾರಂತೆ. ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ತರುಣ್ ಮದುವೆ ಡೇಟ್ ಮುಂದಕ್ಕೆ ಹಾಕ್ತಿನಿ ಅಂದಾಗ ದರ್ಶನ್ ಯಾವುದೇ ಕಾರಣಕ್ಕೂ ಮದುವೆ ಡೇಟ್ ಚೇಂಜ್ ಆಗಬಾರದು. ಫಿಕ್ಸ್ ಆಗಿರೊ ದಿನಾಂಕದಲ್ಲೆ ಮದುವೆ ನಡೆಯಬೇಕು ಅಂತ‌ ಹೇಳಿರೋದಕ್ಕೆ ತರುಣ್ ಮದುವೆ ಡೇಟ್ ಫಿಕ್ಸ್ ಮಾಡಿದ್ದಾರೆ‌.

ಆದ್ರೆ ನಿರ್ದೇಶಕ ತರುಣ್ ಸುಧೀರ್ ಮದುವೆಗೆ ಬರ್ತಾರಾ ದರ್ಶನ್ ಅನ್ನೋದೆ ಪ್ರಶ್ನೆ..!? ಜೈಲು ನಿಯಮಾವಳಿಗಳಲ್ಲಿ ದರ್ಶನ್ ಮದುವೆಗೆ ಬರಲು ಅವಕಾಶ ಇದ್ಯಾ.? ಅಂತ ನೋಡೋದಾದ್ರೆ ಖಂಡಿತವಾಗಿ ಆ ಅವಕಾಶ ಇಲ್ಲ, ನಟ ದರ್ಶನ್ ಈಗ ವಿಚಾರಣಾಧೀನ ಕೈದಿ ಸಜಾ ಕೈದಿಯಾಗಿದ್ರೆ ಪರೋಲ್ ಮೇಲ್ ದರ್ಶನ್ ಮದುವೆಗೆ ಬಂದು ಹೋಗುವ ಅವಕಾಶ ಸಿಗ್ತಿತ್ತು. ಯಾವೂದೇ ಕೈದಿಯ ಮಗ ಅಥವಾ ಮಗಳ ಮದುವೆ ಆಗಿದ್ರೆ ಮಾತ್ರ ಅದಕ್ಕೆ ಅವಕಾಶ ವಿದೆ.

ಸ್ವಂತ ಮಕ್ಕಳ ಮದುವೆಗೆ ಬಿಟ್ಟು, ಸಂಬಂಧಿಕರು ಹಾಗೂ ಸ್ನೇಹಿತರ ಮದುವೆ ಅವಕಾಶವಿಲ್ಲ. ಹೀಗಾಗಿ ದರ್ಶನ್ ಗೆ ಪೆರೋಲ್ ಕೊಡಲು ಬರೋದಿಲ್ಲ. ಅಲ್ಲದೇ ರೇಣುಕಾಸ್ವಾಮಿ ಕೊಲೆ ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ಪೊಲೀಸರು ಇನ್ನೂ ತನಿಖೆ ಪೂರ್ಣಗೊಳಿಸಿಲ್ಲ. ಅಲ್ಲದೇ ನಟ ದರ್ಶನ್ ಇನ್ನು ಜಾಮೀನಿಗೆ ಅರ್ಜಿ ಕೂಡ ಸಲ್ಲಿಸಿಲ್ಲ. ಜಾಮೀನು ಸಿಗದೇ ನಟ ದರ್ಶನ್ ಜೈಲಿನಿಂದ ಹೊರ ಬರೋದಕ್ಕೆ ಸಾಧ್ಯವಿಲ್ಲ. ಇತ್ತ ಪೊಲೀಸರು ತನಿಖೆ ಇನ್ನು ಮುಂದುವರೆಸಿದ್ದು, ಚಾರ್ಜ್ ಶೀಟ್ ಕೂಡ ಸಲ್ಲಿಸಿಲ್ಲ.

Advertisement

ತರುಣ್ ಸುಧೀರ್ ಮದುವೆ ನಿಶ್ಚಯವಾಗಿರೋದು ಆಗಸ್ಟ್ 10-11ಕ್ಕೆ , ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಲು ಸೆಪ್ಟೆಂಬರ್ 8 ರವರೆಗೆ ಕಾಲಾವಕಾಶ ಇದೆ. ಹೀಗಾಗಿ ತರುಣ್ ಸುಧೀರ್ ಮದುವೆಗೆ ದರ್ಶನ್ ಬರೋದು ಬಹುತೇಕ ಅನುಮಾನವಾಗಿದೆ.

Author Image

Advertisement