ಬೆಂಗಳೂರು : ಕೊಲೆ ಕೇಸ್ - ನಟ ದರ್ಶನ್ ಬಂಧಿಸದಂತೆ ರಾಜಕಾರಣಿಗಳಿಂದ ತೀವ್ರ ಒತ್ತಡ..!
04:18 PM Jun 11, 2024 IST
|
Bcsuddi
Advertisement
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅವರನ್ನು ಬಂಧಿಸದಂತೆ ರಾಜಕಾರಣಿಗಳಿಂದ ತೀವ್ರ ಒತ್ತಡ ಬಂದಿದೆ ಎಂದು ಮೂಲಗಳು ಮಾಹಿತಿ ನೀಡಿದೆ. ದರ್ಶನ್ ಅವರನ್ನು ಪ್ರಮುಖ ಆರೋಪಿಯನ್ನಾಗಿ ಮಾಡಬೇಡಿ, ನಟ ದರ್ಶನ್ ಅವರನ್ನು ಬಂಧಿಸಬೇಡಿ ಎಂದು ಪ್ರಮುಖ ರಾಜಕಾರಣಿಗಳಿಂದ ತೀವ್ರ ಒತ್ತಡ ಬಂದಿದೆ ಎಂದು ಹೇಳಲಾಗುತ್ತಿದೆ. ನಿನ್ನೆ ರಾತ್ರಿಯಿಂದಲೇ ಪೊಲೀಸ್ ಆಯುಕ್ತರು ಸೇರಿ ಹಿರಿಯ ಅಧಿಕಾರಿಗಳಿಗೆ ಒತ್ತಡ ಹೇರಲಾಗಿದ್ದು, ಸ್ಯಾಂಡಲ್ ವುಡ್ ಹಿರಿಯರೂ ಕೂಡ ದರ್ಶನ್ ಅವರನ್ನು ಬಂಧಿಸದಂತೆ ಪೊಲೀಸ್ ಅಧಿಕಾರಿಗಳಿಗೆ ತೀವ್ರ ಒತ್ತಡ ಹೇರಿದ್ದಾರೆ ಎಂದು ಹೇಳಲಾಗುತ್ತಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಪ್ರಕರಣ ಸಂಬಂಧ ನಟ ದರ್ಶನ್, ಪವಿತ್ರಗೌಡ ಸೇರಿ ಇದುವರೆಗೆ 13 ಆರೋಪಿಗಳನ್ನು ಬಂಧಿಸಲಾಗಿದೆ. ಇಂದು ಸಂಜೆ ಕೋರ್ಟ್ ಗೆ ಹಾಜರುಪಡಿಸಲಾಗುತ್ತಿದ್ದು, ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡುವ ಸಾಧ್ಯತೆಯಿದೆ.
Advertisement
Next Article