For the best experience, open
https://m.bcsuddi.com
on your mobile browser.
Advertisement

ಬೆಂಗಳೂರು: ಕೊಲೆಮಾಡಿ 1550 ಕಿ.ಮೀ ಬೈಕ್ ರೈಡ್ ಮಾಡಿಕೊಂಡು ಎಸ್ಕೇಪ್ ಆಗಿದ್ದ ಆರೋಪಿ ಮುಕ್ತಿ

12:55 PM Sep 27, 2024 IST | BC Suddi
ಬೆಂಗಳೂರು  ಕೊಲೆಮಾಡಿ 1550 ಕಿ ಮೀ ಬೈಕ್ ರೈಡ್ ಮಾಡಿಕೊಂಡು ಎಸ್ಕೇಪ್ ಆಗಿದ್ದ ಆರೋಪಿ ಮುಕ್ತಿ
Advertisement

ಬೆಂಗಳೂರು: ವೈಯ್ಯಾಲಿಕಾವಲ್ ಮಹಾಲಕ್ಷ್ಮಿ ಭೀಕರ ಹತ್ಯೆ ಕೇಸ್ ಆರೋಪಿ ಮುಕ್ತಿ ರಂಜನ್ ರಾಯ್ ಕೊಲೆಯ ನಂತರ ಬೈಕ್‌ನಲ್ಲಿ ಬೆಂಗಳೂರಿನಿಂದ ಒಡಿಶಾಗೆ ಆರೋಪಿ ಎಸ್ಕೇಪ್ ಆಗಿದ್ನಂತೆ. ಬೆಂಗಳೂರು ಆಂಧ್ರಪ್ರದೇಶ ಪಶ್ಚಿಮಬಂಗಾಳ ಮಾರ್ಗವಾಗಿ ಒಡಿಶಾದ ಭದ್ರಕ್ ಬಳಿಯ ಬೋನಿಪುರ ಹುಟ್ಟೂರಿಗೆ ಹೋಗಿದ್ದನಂತೆ. ಬಸ್, ರೈಲು ಅಥವಾ ಪ್ಲೈಟ್‌ನಲ್ಲಿ ಹೋದರೆ ಪೊಲೀಸರು ಪತ್ತೆ ಮಾಡಬಹುದು ಅನ್ನೋ ಹಿನ್ನೆಲೆಯಲ್ಲಿ ಮುಕ್ತಿ ತನ್ನ ಬಜಾಜ್ ಪ್ಲಾಟಿಮ ಬೈಕ್ ನಲ್ಲೆ ಕೊಲೆಯ ನಂತರ ಬೆಂಗಳೂರಿನಿಂದ 1550 ಕಿಲೋ ಮೀಟರ್ ಸಂಚಾರ ಮಾಡಿದ್ದಾನೆ. ಬೆಂಗಳೂರಿನಿಂದ ಎರಡೂವರೆ ದಿನ ಬೈಕ್ ಓಡಿಸಿ ಹುಟ್ಟೂರಿಗೆ ಹೋಗಿದ್ದಾನೆ. ಮಹಾಲಕ್ಷ್ಮಿ ಹತ್ಯೆಯ ಬಗ್ಗೆ ಆರೋಪಿ ತನ್ನ ಸಹೋದರ ಶಕ್ತಿರಂಜನ್ ರಾಯ್ ಹಾಗೂ ತಾಯಿಗೆ ಮಾಹಿತಿ ನೀಡಿದ್ದ. ಮೃತ ಮಹಾಲಕ್ಷ್ಮಿ ವಿರುದ್ಧ ಆರೋಪಿ ಮುಕ್ತಿರಂಜನ್ ಸಹೋದರ ಶಕ್ತಿರಂಜನ್ ಸುಲಿಗೆ ಆರೋಪ ಮಾಡಿದ್ದು, ಮಹಾಲಕ್ಷ್ಮಿಯಿಂದಾಗಿ ಮುಕ್ತಿರಂಜನ್ ಮನೆಗೆ ಹಣ ಕಳಿಸೋದನ್ನೆ ನಿಲ್ಲಿಸಿದ್ದ. ಮಹಾಲಕ್ಷ್ಮಿ ನನ್ನ ಸಹೋದರನನ್ನ ಬೆದರಿಸಿ ಹಣಕ್ಕೆ ಡಿಮ್ಯಾಂಡ್ ಮಾಡ್ತಿದ್ಲು. ಮಹಾಲಕ್ಷ್ಮಿ, ಮುಕ್ತಿರಂಜನ್ ರಾಯ್‌ನಿಂದ ಚಿನ್ನದಸರ, ಮೂರು ಉಂಗುರ, ದುಬಾರಿ ಮೊಬೈಲ್ ಪಡೆದಿದ್ದಳು. ಕೊಲೆಯ ನಂತರ ಮುಕ್ತಿರಂಜನ್ ರಾಯ್ ಮೂರು ದಿನ ನನ್ನೊಟ್ಟಿಗೆ ಬೆರ್ಹಾಪುರಂ ನಲ್ಲಿ ವಾಸವಿದ್ದ. ಎಲ್ಲ ವಿಚಾರವನ್ನು ನನ್ನೊಟ್ಟಿಗೆ ಹಾಗೂ ತಾಯಿಗೆ ತಿಳಿಸಿದ್ದ ಎಂದು ಆರೋಪಿ ಸಹೋದರ ಶಕ್ತಿರಂಜನ್ ಪೊಲೀಸರ ಮುಂದೆ ಹೇಳಿದ್ದಾನೆ. ಮಹಾಲಕ್ಷ್ಮಿ ಕೊಲೆಯ ನಂತರ ಕೊಲೆ ವಿಚಾರವನ್ನು ಇಬ್ಬರು ಸಹೋದರರು ಹಾಗೂ ತಾಯಿಗೆ ತಿಳಿಸಿದ್ದಾನೆ. ಮುಕ್ತಿರಂಜನ್ ತಂದೆ ತಾಯಿಯನ್ನ ಭೇಟಿಯಾದ ಬಳಿಕ ಮುಂಜಾನೆ ನೇಣಿಗೆ ಶರಣಾಗಿದ್ದಾನೆ. ಮಹಾಲಕ್ಷ್ಮಿ ಕೊಲೆ ವಿಚಾರವನ್ನು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿರೋ ಮುಕ್ತಿ ಸೆಪ್ಟೆಂಬರ್ 2ರಂದು ನನಗೂ ಮಹಾಲಕ್ಷ್ಮಿಗೂ ಗಲಾಟೆಯಾಯಿತು. ಮಹಾಲಕ್ಷ್ಮಿ ನನ್ನ ಮೇಲೆ ಹಲ್ಲೆ ಮಾಡಿದಳು. ನಾನು‌ ಮಹಾಲಕ್ಷ್ಮಿ ಕಪಾಳಕ್ಕೆ ಹೊಡೆದೆ ಈ ವೇಳೆ ಕುಸಿದುಬಿದ್ದು ಮೃತಪಟ್ಟಳು. ಬಳಿಕ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿ ತುಂಬಿ ಒಡಿಶಾಗೆ ಬಂದೆ ಎಂದು ಮುಕ್ತಿರಂಜನ್ ರಾಯ್ ಡೆತ್ ನೋಟ್ ನಲ್ಲಿ ಬರೆದಿದ್ದಾನಂತೆ.

Author Image

Advertisement