For the best experience, open
https://m.bcsuddi.com
on your mobile browser.
Advertisement

ಬೆಂಗಳೂರು: ಇನ್ಮುಂದೆ ನೋ ಝೀರೋ ಟ್ರಾಫಿಕ್, ನನಗೆ ಝೀರೋ ಟ್ರಾಫಿಕ್ ಇಲ್ಲ - ಸಿಎಂ

10:13 AM Jul 07, 2024 IST | Bcsuddi
ಬೆಂಗಳೂರು  ಇನ್ಮುಂದೆ ನೋ ಝೀರೋ ಟ್ರಾಫಿಕ್  ನನಗೆ ಝೀರೋ ಟ್ರಾಫಿಕ್ ಇಲ್ಲ   ಸಿಎಂ
Advertisement

ಬೆಂಗಳೂರು: ರಾಜ್ಯದಲ್ಲಿ ಅಪರಾಧಗಳು ಕಡಿಮೆಯಾಗಬೇಕು. ಈ ನಿಟ್ಟಿನಲ್ಲಿ ಪೊಲೀಸರು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಜೊತೆಗೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು ನೋ ಝೀರೋ ಟ್ರಾಫಿಕ್ ಪಾಲನೆ ಮಾಡಬೇಕು. ನನಗೆ ಜೀರೋ ಟ್ರಾಫಿಕ್ ಇಲ್ಲ. ಪೊಲೀಸರು ನನಗಾಗಿ ಟ್ರಾಫಿಕ್ ನಿಲ್ಲಿಸಲ್ಲ. ದಾರಿ ಮಾಡಿಕೊಡುತ್ತಾರೆ ಅಷ್ಟೇ. ಬೇರೆ ಅಧಿಕಾರಿಗಳು ಹಾಗೂ ಸಚಿವರು ಕೂಡ ಇದನ್ನು ಪಾಲನೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಇಂದು ಬೆಂಗಳೂರಿನ ಡಿಜಿ ಐಜಿಪಿ ಮುಖ್ಯ ಕಚೇರಿಯಲ್ಲಿ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಪರಿಶೀಲನಾ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನೀತಿ ಪಾಠ ಮಾಡಿದರು.

Author Image

Advertisement