ಬೆಂಗಳೂರಿನ ಕೆ.ಆರ್ ಆಸ್ಪತ್ರೆ ಮೇಲೆ ಲೋಕಾಯುಕ್ತ ದಾಳಿ
05:42 PM Dec 25, 2023 IST | Bcsuddi
Advertisement
ಬೆಂಗಳೂರು: ಬೆಂಗಳೂರಿನ ಕೆ.ಆರ್ ಸಾರ್ವಜನಿಕ ಆಸ್ಪತ್ರೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.ಸಾರ್ವಜನಿಕರಿಂದ ನಿರಂತರವಾಗಿ ದೂರು ಬಂದ ಹಿನ್ನಲೆಯಲ್ಲಿಈ ದಾಳಿಯನ್ನು ನಡೆಸಲಾಗಿದೆ.
ಇದೀಗ ದಾಳಿಯನ್ನು ನಡೆಸಿರುವಂತ ಲೋಕಾಯುಕ್ತ ಅಧಿಕಾರಿಗಳು, ಸತತ ನಾಲ್ಕು ಗಂಟೆಗಳಿಂದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಕೋಲಾರ ಲೋಕಾಯುಕ್ತ ಎಸ್.ಪಿ ಉಮೇಶ್ ನೇತೃತ್ವದಲ್ಲಿ ಈ ದಾಳಿಯನ್ನು ನಡೆಸಲಾಗಿದೆ. ಈ ದಾಳಿಯ ವೇಳೆ ಲೋಕಾಯುಕ್ತ ನ್ಯಾಯಾಧೀಶ ಮೊಹಮ್ಮದ್ ಮುಝಾವರ್ ಕೂಡ ಭಾಗಿಯಾಗಿದ್ದಾರೆ ಎನ್ನಲಾಗಿದೆ.
Advertisement