ಬಿಲ್ಕಿಸ್ ಬಾನು ಪ್ರಕರಣ: ಮೂವರು ದೋಷಿಗಳು ಶರಣಾಗಲು ಕಾಲಾವಕಾಶಕ್ಕೆ ಸುಪ್ರೀಂಗೆ ಮನವಿ
04:05 PM Jan 18, 2024 IST | Bcsuddi
Advertisement
ನವದೆಹಲಿ: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಹಾಗೂ ಆಕೆಯ ಕುಟುಂಬಸ್ಥರ ಕೊಲೆ ಪ್ರಕರಣ ದೋಷಿಗಳ ಪೈಕಿ ಮೂವರು ಶರಣಾಗಲು ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಕೋರಿ ಗುರುವಾರ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ ಹಾಗೂ ಸಂಜಯ್ ಕರೊಲ್ ಅವರ ಪೀ ಠದ ಮುಂದೆ ಮನವಿ ಸಲ್ಲಿಸಲಾಗಿದ್ದು, ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರ ಪೀಠದ ಮುಂದೆ ಇಡುವಂತೆ ರಿಜಿಸ್ಟ್ರಿಗೆ ಸೂಚಿಸಲಾಗಿದೆ.
ಶರಣಾಗಲು ಹೆಚ್ಚಿನ ಕಾಲಾವಕಾಶ ನೀಡಬೇ ಕು ಎಂದು ಮೂವರು ಆರೋಪಿಗಳು ಕೋರಿದ್ದಾರೆ. ಆದರೆ ಪೀಠ ಪುನರ್ ರಚನೆ ಆಗಬೇಕಾಗಿರುವುದರಿಂದ, ರಿಜಿಸ್ಟ್ರಿ ಸಿಜೆಐ ಅವರಿಂದ ನಿರ್ದೇಶನ ತೆಗೆದುಕೊಳ್ಳಬೇಕು ಎಂದು ಪೀಠ ಹೇಳಿದೆ.
Advertisement
ಪ್ರಕರಣದ 11 ದೋಷಿಗಳನ್ನು ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ನಿರ್ಧಾರವನ್ನು ಜನವರಿ 8ರಂದು ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು. ಅಲ್ಲದೆ ಎರಡು ವಾರದೊಳಗೆ ಶರಣಾಗಬೇಕು ಎಂದು ಆದೇಶಿಸಿತ್ತು.