For the best experience, open
https://m.bcsuddi.com
on your mobile browser.
Advertisement

'ಬಿಜೆಪಿ ಹಿಂದೂಗಳನ್ನು ಗುತ್ತಿಗೆ ತೆಗೆದುಕೊಂಡಿದ್ದಾರಾ?'- ರಾಜಣ್ಣ ಪ್ರಶ್ನೆ

10:49 AM Jan 14, 2024 IST | Bcsuddi
 ಬಿಜೆಪಿ ಹಿಂದೂಗಳನ್ನು ಗುತ್ತಿಗೆ ತೆಗೆದುಕೊಂಡಿದ್ದಾರಾ    ರಾಜಣ್ಣ ಪ್ರಶ್ನೆ
Advertisement

ನವದೆಹಲಿ: ಬಿಜೆಪಿ ಹಿಂದೂಗಳನ್ನು ಗುತ್ತಿಗೆ ತೆಗೆದುಕೊಂಡಿದ್ದಾರಾ? ಅಥವಾ ಅವರಿಗೆ ಜಾಗೀರು ಕೊಟ್ಟಿದ್ದೀವಾ? ನಾವು ಹಿಂದೂಗಳು ಅಲ್ಲದೇ ಇನ್ನೇನು? ಎಂದು ಸಚಿವ ಕೆ.ಎನ್.ರಾಜಣ್ಣ ಪ್ರಶ್ನಿಸಿದ್ದಾರೆ.

ಸಿ ಎಂ ಸಿದ್ದರಾಮಯ್ಯ ಅವರ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡುವ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಜ. 22 ರ ನಂತರ ರಾಮಮಂದಿರಕ್ಕೆ ಭೇಟಿ ನೀಡುವ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಸರಿಯಾಗಿದೆ. ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿದರೆ ತಪ್ಪೇನು? ರಾಮಮಂದಿರ ಬಿಜೆಪಿ ನಾಯಕರ ಸ್ವತ್ತೆ? ಈ ಹಿಂದೆ ಹೇಳಿರುವುದೂ ಸರಿ ಇದೆ. ಈಗ ಹೇಳುವುದು ಕೂಡ ಸರಿಯಾಗಿಯೇ ಇದೆ ಎಂದು ಸಿದ್ದಯಾಮಯ್ಯ ಅವರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡರು.

ಮತಕ್ಕಾಗಿ ಬಿಜೆಪಿ ಪದೇ ಪದೆ ಹಿಂದೂ ಹಿಂದೂ ಎಂದು ಹೇಳುತ್ತದೆ. ಅಂಬೇಡ್ಕರ್ ತಾನು ಹಿಂದೂವಾಗಿ ಸಾಯುವುದಿಲ್ಲ ಎಂದು ಹೇಳಿದ್ದರು ಯಾಕೆ? ಈ ರೀತಿಯ ಹಿಂದುತ್ವ ಸ್ವಾರ್ಥಕ್ಕೆ ಬಳಕೆ ಮಾಡಿಕೊಂಡರು ಎಂಬ ಕಾರಣದಿಂದ ವಿಮುಖರಾದರು ಎಂದು ಹೇಳಿದರು.

Advertisement

ಬಿಜೆಪಿ ಈ ರೀತಿಯೆಲ್ಲ ಮಾತನಾಡುವ ಬದಲು ಮೊದಲು ರಾಮಮಂದಿರಕ್ಕೆ ದಲಿತರನ್ನು ಬಿಡಲು ಹೇಳಿ. ಅಲ್ಲಿ ಒರ್ವ ದಲಿತ ಅರ್ಚಕನನ್ನು ನೇಮಿಸಲು ಹೇಳಿ. ಹಿಂದೂಗಳಿಗೆ ಅವರು ಏನು ಮಾಡಿದ್ದಾರೆ? ಬರೀ ಚುನಾವಣೆಗೋಸ್ಕರ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ತಿಳಿಸಿದರು.

Author Image

Advertisement