ಬಿಜೆಪಿ ಮುಖಂಡ ರಂಜಿತ್ ಶ್ರೀನಿವಾಸನ್ ಹತ್ಯೆ ಪ್ರಕರಣ : ಕೇರಳದ 15 ಪಿಎಫ್ಐ ಕಾರ್ಯಕರ್ತರಿಗೆ ಮರಣದಂಡನೆ
01:40 PM Jan 30, 2024 IST | Bcsuddi
Advertisement
ಕೇರಳ : ಬಿಜೆಪಿ ನಾಯಕನ ಹತ್ಯೆ ಪ್ರಕರಣದಲ್ಲಿ ಕೇರಳ ಕೋರ್ಟ್ ಮಹತ್ವದ ತೀರ್ಪು ನೀಡಿದೆ. 15 ಮಂದಿ ಪಿಎಫ್ಐ ಕಾರ್ಯಕರ್ತರಿಗೆ ಮರಣದಂಡನೆ ಶಿಕ್ಷೆ ಪ್ರಕಟಿಸಲಾಗಿದೆ.
ಪಿಎಫ್ಐ ಕಾರ್ಯಕರ್ತರ ಮೇಲೆ ಬಿಜೆಪಿ ನಾಯಕ ರಂಜಿತ್ ಅವರನ್ನು ಹೆಂಡತಿ, ಮಕ್ಕಳ ಎದುರೇ ಹತ್ಯೆಗೈದಿದ್ದ ಪ್ರಕರಣ ದಾಖಲಾಗಿತ್ತು.
ಕೊಲೆಯಾದ ರಂಜಿತ್ ಶ್ರೀನಿವಾಸನ್ ಅವರು ಕೇರಳ ಬಿಜೆಪಿಯ ಒಬಿಸಿ ನಾಯಕರಾಗಿದ್ದರು. 2021ರ ಡಿಸೆಂಬರ್ 19ರಂದು ಆಲಪುಜ್ಜದ ರಂಜಿತ್ ಮನೆಯಲ್ಲೇ ಪಿಎಫ್ಐ ಕಾರ್ಯಕರ್ತರು ಹತ್ಯೆಗೈದಿದ್ದರು. ಹೆಂಡತಿ, ಮಕ್ಕಳು ಕಣ್ಣೆದುರೇ ರಂಜಿತ್ ಅವರನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
Advertisement
ಬಿಜೆಪಿ ನಾಯಕ ರಂಜಿತ್ ಅವರ ಕೊಲೆ ಪ್ರಕರಣದಲ್ಲಿ ಪಿಎಫ್ಐ ಸದಸ್ಯರ ಕೈವಾಡ ಸಾಬೀತಾಗಿತ್ತು. ಕೇರಳದ ಮಾವೇಲಿಕ್ಕರ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ-I ಇಂದು ತನ್ನ ಮಹತ್ವದ ತೀರ್ಪು ಪ್ರಕಟ ಮಾಡಿದೆ. 15 ಮಂದಿ ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಗಿದ್ದು, ಶಿಕ್ಷೆಯ ಪ್ರಮಾಣವನ್ನು ನಂತರ ಘೋಷಿಸುವುದಾಗಿ ಕೋರ್ಟ್ ತಿಳಿಸಿದೆ.