For the best experience, open
https://m.bcsuddi.com
on your mobile browser.
Advertisement

ಬಿಜೆಪಿ- ಜೆಡಿಎಸ್ ಘಟಾನುಘಟಿ ನಾಯಕರ ಪಾದಯಾತ್ರೆ.! ತಮ್ಮ ಬೇನಾಮಿ ಆಸ್ತಿ ಘೋಷಣೆ ಮಾಡಲಿ.!

05:30 PM Aug 06, 2024 IST | BC Suddi
ಬಿಜೆಪಿ  ಜೆಡಿಎಸ್ ಘಟಾನುಘಟಿ ನಾಯಕರ ಪಾದಯಾತ್ರೆ   ತಮ್ಮ ಬೇನಾಮಿ ಆಸ್ತಿ ಘೋಷಣೆ ಮಾಡಲಿ
Advertisement

ಮೈಸೂರು:  ಬಿಜೆಪಿ ಜೆಡಿಎಸ್ ನವರು ಮಾಡುತ್ತಿರುವ ಪಾದಯಾತ್ರೆ ಅವರ ತಪ್ಪಿನ  ಪ್ರಾಯಶ್ಚಿತ್ತಕ್ಕಾಗಿ ಮಾಡುತ್ತಿರುವ ಪಾದಯಾತ್ರೆ. ಪಾದಯಾತ್ರೆಯಲ್ಲಿ ಭಾಗವಹಿಸಿರುವ ಘಟಾನುಘಟಿ ನಾಯಕರು ತಮ್ಮ ಬೇನಾಮಿ ಆಸ್ತಿ ಘೋಷಣೆ ಮಾಡಲಿ ಎಂದು ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಆಗ್ರಹಿಸಿದರು.

ಬಿಜೆಪಿ ಜೆಡಿಎಸ್ ಪಾದಯಾತ್ರೆ ಕುರಿತು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಎಂ.ಕೆ ಸೋಮಶೇಖರ್, ಬಿಜೆಪಿ ಜೆಡಿಎಸ್ ನವರ  ಕಾಲದಲ್ಲಿ ಮಾಡಿದ ಭ್ರಷ್ಟಾಚಾರಕ್ಕೆ ಪ್ರಾಯಶ್ಚಿತ್ತವಾದ ಪಾದಯಾತ್ರೆ. ಇವರು ಮಾಡುತ್ತಿರುವ ಪಾದಯಾತ್ರೆ ಬರಿ ಡೋಂಗಿ ಪಾದಯಾತ್ರೆ. ಅಲ್ಲಿ ಭಾಗವಹಿಸುವ ಜನ ಸ್ಥಳೀಯ ರಲ್ಲ. ಬೇರೆ ಎಲ್ಲಿಂದಲೋ ಹಣ ಕೊಟ್ಟು ಕರೆತಂದು ಪಾದಯಾತ್ರೆಯಲ್ಲಿ ಸೇರಿದ್ದಾರೆ. ಇದೊಂದು ವಿಜಯೇಂದ್ರ, ಎಚ್. ಡಿಕೆ ಅವರ ಪ್ರಯೋಜಕತ್ವದ ಪಾದಯಾತ್ರೆ ಎಂದು ಟೀಕಿಸಿದರು.

Advertisement

ಸಿಎಂ ಜನಪ್ರಿಯತೆ ನೋಡಿ ಸಹಿಸಿಕೊಳ್ಳಲಾಗದೆ ಈ ರೀತಿ ಆಪಾದನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡಿ ಈ ಬಿಜೆಪಿ ಜೆಡಿಎಸ್ ನವರೇ ಬೆತ್ತಲಾಗುತ್ತಿದ್ದಾರೆ. ಇವರು ಎಷ್ಟು ಪ್ರಾಮಾಣಿಕರು ಎಂಬುದನ್ನ ಆತ್ಮಾವಲೋಕನ‌ಮಾಡಿಕೊಳ್ಳಬೇಕಿದೆ. ಇವರು ಏನೇ ಪ್ರಯತ್ನ ಮಾಡಿದರೂ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರ ಏನೂ ಇಲ್ಲ ಎಂದರು.

Tags :
Author Image

Advertisement