ಬಿಜೆಪಿ ಎಎಪಿಗೆ ಮಾತ್ರ ಹೆದರುತ್ತದೆ: ಕೇಜ್ರವಾಲ್
07:41 AM Feb 12, 2024 IST | Bcsuddi
Advertisement
ದೆಹಲಿ: ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎಎಪಿಗೆ ಮಾತ್ರವೇ ಹೆದರುತ್ತಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರವಾಲ್ ಹೇಳಿದ್ದಾರೆ.
ದೆಹಲಿಯ ಏಳೂ ಕ್ಷೇತ್ರಗಳನ್ನು ನಾವು ಗೆಲ್ಲಲಿದ್ದೇವೆ. ಅಂತೆಯೇ ಪಂಜಾಬಿನ ಜನ ಕೂಡ ರಾಜ್ಯದ ೧೩ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳಿಗೇ ಆಶೀರ್ವಾದ ಮಾಡುವ ವಿಶ್ವಾಸವಿದೆ ಎಂದ ಅವರು, ಬಿಜೆಪಿ ನನ್ನ ವಿರುದ್ಧ ದಿನಕ್ಕೊಂದು ಆರೋಪ ಮಾಡುತ್ತಿದ್ದು, ಸಿಬಿಐ, ಐಟಿ, ಇಡಿ ಹಾಗೂ ಪೊಲೀಸ್ ಸೇರಿ ಎಲ್ಲರಿಂದಲೂ ಸಾಕಷ್ಟು ನೋಟಿಸ್ ಕೊಡಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
Advertisement