For the best experience, open
https://m.bcsuddi.com
on your mobile browser.
Advertisement

ಬಗೆದಷ್ಟೂ ಬಯಲಾಗುತ್ತಿದೆ ರೇಣುಕಾಸ್ವಾಮಿ ಕೊಲೆ ರಹಸ್ಯ

12:28 PM Jun 13, 2024 IST | Bcsuddi
ಬಗೆದಷ್ಟೂ ಬಯಲಾಗುತ್ತಿದೆ ರೇಣುಕಾಸ್ವಾಮಿ ಕೊಲೆ ರಹಸ್ಯ
Advertisement

ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ವಿಚಾರಣೆ ಮುಂದುವರೆದಿದ್ದು, ದರ್ಶನ್ ಗ್ಯಾಂಗ್ ನಡುರಸ್ತೆಯಲ್ಲೇ ರೇಣುಕಾಸ್ವಾಮಿಯನ್ನು ಅಡ್ಡಗಟ್ಟಿ ಕಿಡ್ನಾಪ್ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕ್ರೀಮ್ ಕಲರ್ ಶರ್ಟ್ ನಲ್ಲಿ ಮನೆಯಿಂದ ರೇಣುಕಾಸ್ವಾಮಿ ಹೊರಹೋಗಿದ್ದಾರೆ. ಆದ್ರೆ ರೇಣುಕಾಸ್ವಾಮಿ ಮೃತ ದೇಹದ ಮೇಲೆ ಕಪ್ಪು ಬಣ್ಣದ ಟೀ ಶರ್ಟ್ ಇತ್ತು. ಇನ್ನು ನಡು ರಸ್ತೆಯಲ್ಲೇ ಅಡ್ಡಗಟ್ಟಿ ಆರೋಪಿಗಳು ಕಿಡ್ನಾಪ್ ಮಾಡಿರುವ ಸಾಧ್ಯತೆ ಇದೆ. ಅಪೋಲೋ ಫಾರ್ಮಸಿ ಕಡೆ IUDP ರಸ್ತೆಯಲ್ಲಿ ರೇಣುಕಾಸ್ವಾಮಿ ತೆರಳುತ್ತಿದ್ದಾರೆ. ಇನ್ನು ಅಪೋಲೋ ಫಾರ್ಮಸಿಯಿಂದ ಹೊರಗೆ ಬಂದು ಸ್ಕೂಟಿಯಲ್ಲಿ ಹೊರಟ ದೃಶ್ಯ CCTV ಯಲ್ಲಿ ಸೆರೆಯಾಗಿದೆ. ಮಾರ್ಗ ಮಧ್ಯದಲ್ಲಿ ಸ್ಕೂಟಿ ಅಡ್ಡಗಟ್ಟಿ ಆರೋಪಿಗಳು ಕಿಡ್ನಾಪ್ ಮಾಡಿದ್ದಾರೆ. ಸಿಸಿಟಿವಿ ದೃಶ್ಯ ಸೆರೆಯಾದ 30 ಮೀಟರ್ ದೂರದಲ್ಲೇ ಬೈಕ್ ಪತ್ತೆಯಾಗಿದೆ. ಹೈವೇ ಪಕ್ಕದಲ್ಲೇ ಕಾರ್ ನಿಲ್ಲಿಸಿ ರೇಣುಕಾಸ್ವಾಮಿಯನ್ನು ಆರೋಪಿಗಳು ಕಿಡ್ನ್ಯಾಪ್ ಮಾಡಿದ್ದಾರೆ.

Author Image

Advertisement