For the best experience, open
https://m.bcsuddi.com
on your mobile browser.
Advertisement

ಪ್ರಧಾನಿಯಾಗಿ ಮೊದಲ ದಿನವೇ ಬಿಗ್‌ ಅನೌನ್ಸ್ - 20 ಸಾವಿರ ಕೋಟಿ ರೂಪಾಯಿ ಕಿಸಾನ್ ಸಮ್ಮಾನ್ ನಿಧಿ ರಿಲೀಸ್

01:11 PM Jun 10, 2024 IST | Bcsuddi
ಪ್ರಧಾನಿಯಾಗಿ ಮೊದಲ ದಿನವೇ ಬಿಗ್‌ ಅನೌನ್ಸ್   20 ಸಾವಿರ ಕೋಟಿ ರೂಪಾಯಿ ಕಿಸಾನ್ ಸಮ್ಮಾನ್ ನಿಧಿ ರಿಲೀಸ್
Advertisement

ನವದೆಹಲಿ : 3ನೇ ಬಾರಿ ಪ್ರಧಾನಿಯಾಗಿ ಕೆಲಸ ಆರಂಭಿಸಿದ ಮೋದಿಯವರಿಗೆ ಸಿಬ್ಬಂದಿಗಳಿಂದ ಅದ್ಧೂರಿ ಸ್ವಾಗತ ದೊರೆಯಿತು. ಇನ್ನು, ಪ್ರಧಾನಿಯಾದ ಮೊದಲ ದಿನವೇ ರೈತರಿಗೆ ಮೋದಿ ಬಂಪರ್‌ ನೀಡಿದ್ದು, ರೈತ ಸಮ್ಮಾನ್‌ ನಿಧಿಯ 20 ಸಾವಿರ ಕೋಟಿ ರಿಲೀಸ್‌ ಮಾಡಿದ್ದಾರೆ. ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ 24 ಗಂಟೆಯೊಳಗೆ ಪ್ರಧಾನಿ ಮೋದಿ, ದೇಶದ ರೈತರಿಗೆ ಭರ್ಜರಿ ಗುಡ್‌ನ್ಯೂಸ್‌ ನೀಡಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಪ್ರಧಾನಿ ನರೇಂದ್ರ ಮೋದಿ ರೈತರ ಬಗ್ಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೇವಲ ಒಂದು ದಿನದ ನಂತರ, ಪ್ರಧಾನಿ ಮೋದಿ ರೈತರ ಬಗ್ಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಕಿಸಾನ್ ಸಮ್ಮಾನ್ ನಿಧಿಯ ಕಂತು ಬಿಡುಗಡೆ ಮಾಡುವ ಕಡತಕ್ಕೆ ಪ್ರಧಾನಿ ಮೋದಿ ಸಹಿ ಹಾಕಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ನಿಧಿಯ 17ನೇ ಕಂತನ್ನು ಬಿಡುಗಡೆ ಮಾಡಲು ಪ್ರಧಾನಿ ಮೋದಿ ನಿರ್ಧರಿಸಿದ್ದು, ಹೀಗಾಗಿ ತಮ್ಮ ಮೊದಲ ಕಡತಕ್ಕೆ ಸಹಿ ಹಾಕಿದ್ದಾರೆ. ಇದರಿಂದ 9.3 ಕೋಟಿ ರೈತರಿಗೆ ಅನುಕೂಲವಾಗಲಿದ್ದು, ಅಂದಾಜು 20 ಸಾವಿರ ಕೋಟಿ ರೂಪಾಯಿ ರೈತರ ಅನುಕೂಲಕ್ಕೆ ಸಿಗಲಿದೆ.

Author Image

Advertisement