For the best experience, open
https://m.bcsuddi.com
on your mobile browser.
Advertisement

ಪ್ರತಿಭಟನಾನಿರತ ವೈದ್ಯರಿಗೆ ಮಾತುಕತೆಗೆ ಕೊನೆಯ ಆಹ್ವಾನ ನೀಡಿದ ಮಮತಾ ಬ್ಯಾನರ್ಜಿ

04:50 PM Sep 16, 2024 IST | BC Suddi
ಪ್ರತಿಭಟನಾನಿರತ ವೈದ್ಯರಿಗೆ ಮಾತುಕತೆಗೆ ಕೊನೆಯ ಆಹ್ವಾನ ನೀಡಿದ ಮಮತಾ ಬ್ಯಾನರ್ಜಿ
Advertisement

ಕೋಲ್ಕತಾ :ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನಾನಿರತ ವೈದ್ಯರನ್ನು ಕೋಲ್ಕತಾದಲ್ಲಿನ ತಮ್ಮ ನಿವಾಸಕ್ಕೆ ಮಾತುಕತೆಗೆ ಬರುವಂತೆ ಸಿಎಂ ಮಮತಾ ಬ್ಯಾನರ್ಜಿ ಮತ್ತೆ ಆಹ್ವಾನ ನೀಡಿದ್ದಾರೆ. ಅಲ್ಲದೇ ಇದು ಐದನೇ ಹಾಗೂ ಕೊನೆಯ' ಆಹ್ವಾನ ಎಂದು ಅವರು ತಿಳಿಸಿದ್ದಾರೆ.

ಪ್ರತಿಭಟನೆ ನಡೆಸುತ್ತಿರುವ ವೈದ್ಯರು ಹಾಗೂ ಮಮತಾ ಬ್ಯಾನರ್ಜಿ ಅವರ ನಡುವೆ ಮಾತುಕತೆಯೇ ಸವಾಲಾಗಿ ಉಳಿದಿದ್ದು, ಸಂಜೆ 5 ಗಂಟೆಗೆ ಸಭೆಗೆ ಹಾಜರಾಗುವಂತೆ ಮಮತಾ ಬ್ಯಾನರ್ಜಿ ಆಹ್ವಾನಿಸಿದ್ದಾರೆ.

ನಮ್ಮ ಚರ್ಚೆಗೆ ಪೂರಕವಾಗಿ, ಮುಕ್ತ ಮನಸ್ಸಿನಿಂದ ಮಾತುಕತೆ ನಡೆಸಲು ಕಾಳಿಘಾಟ್ ನಿವಾಸದಲ್ಲಿನ ಮುಖ್ಯಮಂತ್ರಿಗಳ ನಿವಾಸದಲ್ಲಿನ ಸಭೆಗೆ ಬರುವಂತೆ ನಿಮಗೆ ಮತ್ತೊಮ್ಮೆ ನಾವು ಆಹ್ವಾನ ನೀಡುತ್ತೇವೆ. ಇದು 5ನೇ ಮತ್ತು ಕೊನೇ ಬಾರಿಗೆ ಸಿಎಂ ನಿಮ್ಮನ್ನು ಆಹ್ವಾನಿಸಿದ್ದಾರೆ ಎಂದು ವೈದ್ಯರಿಗೆ ಬರೆದಿರುವ ಪತ್ರದಲ್ಲಿ ಬಂಗಾಳದ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಹೇಳಿದ್ದಾರೆ.

Advertisement

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

Author Image

Advertisement