ಪ್ರಜಾಪ್ರಭುತ್ವ ಉಳಿಸಿ ಮಾ. 31ಕ್ಕೆ ಬೃಹತ್ ರ್ಯಾಲಿ
05:48 PM Mar 24, 2024 IST | Bcsuddi
Advertisement
ದೆಹಲಿ: ಮಾ.31ರಂದು INDIA ಮೈತ್ರಿಕೂಟವು ರಾಮ್ ಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಂಡಿದ್ದು, ಪ್ರಮುಖ ನಾಯಕರು ಪ್ರಜಾಪ್ರಭುತ್ವ ಉಳಿಸುವಂತೆ ಕರೆ ನೀಡಲಿದ್ದಾರೆಂದು ಕೈ ನಾಯಕ ಅರ್ವಿಂದರ್ ಸಿಂಗ್ ಲವಿ ಹೇಳಿದ್ದಾರೆ.
AAP ನಾಯಕ ಸೌರಭ್ ಭಾರಧ್ವಾಜ್ ಪ್ರತಿಕ್ರಿಯಿಸಿ, ರಾಮ್ ಲೀಲಾ ಮೈದಾನವು ಐತಿಹಾಸಿಕ ಕ್ಷಣಗಳಿಗೆ ಉದಾಹರಣೆಯಾಗಿದ್ದು, AAPಯೂ ಅಲ್ಲಿಂದಲೇ ಉದಯಿಸಿದೆ. ಅಂದು ಮೈತ್ರಿ ನಾಯಕರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದಿದ್ದಾರೆ.
Advertisement