'ಪುಷ್ಪ' ಚಿತ್ರದ ನಟ ಮಹಿಳೆ ಆತ್ಮಹತ್ಯೆ ಕೇಸ್ ಲ್ಲಿ ಅರೆಸ್ಟ್.!
07:49 AM Dec 07, 2023 IST | Bcsuddi
Advertisement
ಹೈದರಬಾದ್: ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಚಿತ್ರದಲ್ಲಿ ಕೇಶವ ಪಾತ್ರ ಮಾಡಿದ್ದ ಜಗದೀಶ್ ಅವರನ್ನು ತೆಲಂಗಾಣದ ಪಂಜಾಗುಟ್ಟ ಪೊಲೀಸರು ಬಂಧಿಸಿದ್ದಾರೆ.
ಜೂನಿಯರ್ ಆರ್ಟಿಸ್ಟ್(ಮಹಿಳೆ) ಬೇರೊಬ್ಬರೊಂದಿಗೆ ಏಕಾಂತದಲ್ಲಿದ್ದಾಗ ಫೋಟೋ ಕ್ಲಿಕ್ಕಿಸಿ, ಅವುಗಳನ್ನು ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ. ಕಿರುಕುಳ ತಾಳಲಾರದೆ ಕಳೆದ ತಿಂಗಳು 29ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಂದಿನಿಂದ ಜಗದೀಶ್ ಪರಾರಿಯಾಗಿದ್ದು, ನಿನ್ನೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
Advertisement