For the best experience, open
https://m.bcsuddi.com
on your mobile browser.
Advertisement

ಪುತ್ರನನ್ನು ಕೊಂದ ಸುಚನಾ ಸೇಠ್‌‌ಗೆ ಮಾನಸಿಕ ಖಿನ್ನತೆ ಇಲ್ಲ -ಗೋವಾ ಪೊಲೀಸ್‌

12:38 PM Feb 14, 2024 IST | Bcsuddi
ಪುತ್ರನನ್ನು ಕೊಂದ ಸುಚನಾ ಸೇಠ್‌‌ಗೆ ಮಾನಸಿಕ ಖಿನ್ನತೆ ಇಲ್ಲ  ಗೋವಾ ಪೊಲೀಸ್‌
Advertisement

ಪಣಜಿ: 4 ವರ್ಷದ ಮಗನನ್ನು ಕೊಂದ ಎಐ ಸ್ಟಾರ್ಟಪ್ ಸಿಇಒ ಸುಚನಾ ಸೇಠ್ ಗೆ ಯಾವುದೇ ಮಾನಸಿಕ ಖಿನ್ನತೆ ಇಲ್ಲ ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ.

ಫೆಬ್ರವರಿ 2 ರಂದು ಸುಚನಾ ಸೇಠ್ ಅವರನ್ನು ಇನ್‌ ಸ್ಟಿಟ್ಯೂಟ್ ಅಫ್ ಸೈಕಾಲಜಿ ಮತ್ತು ಹ್ಯೂಮನ್ ಬಿಹೇವಿಯರ್ ಸಂಸ್ಥೆಯಲ್ಲಿ ಮಾನಸಿಕ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಸುಚನಾಳ ಪರೀಕ್ಷೆಯ ವರದಿಯನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ಇನ್ನು ಈ ವರದಿಯಲ್ಲಿ ಸುಚನಾಳಿಗೆ ಯಾವುದೇ ರೀತಿಯಾದ ಮಾನಸಿಕ ಖಿನ್ನತೆ ಇಲ್ಲ ಎಂದು ಸಾಬೀತಾಗಿದೆ. ಸುಚನಾಗೆ ಗಂಡನ ಮೇಲಿದ್ದ ಅತಿಯಾದ ಕೋಪವು ಹೀಗೆ ಮಾಡಿಸಿರಬಹುದೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Advertisement

ಇನ್ನು ಸುಚನಾಗೆ ನಡೆಸಿದ ಮಾನಸಿಕ ಪರೀಕ್ಷೆಯ ವೇಳೆ ಆಕೆ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ದಾಳೆ. ನನಗೆ ಯಾವುದೇ ರೀತಿಯ ಮಾನಸಿಕ ತೊಂದರೆ ಇಲ್ಲ, ಅದರ ಯಾವುದೇ ಲಕ್ಷಣಗಳೂ ಇಲ್ಲ. ಈವರೆಗೆ ಮಾನಸಿಕ ಖಿನ್ನತೆಗೆ ಯಾವುದೇ ರೀತಿಯಾದ ಚಿಕಿತ್ಸೆ ಪಡೆದಿಲ್ಲ. ನನಗೆ ಕೆಲಸದ ಒತ್ತಡವಾಗಲೀ, ಕೌಟುಂಬಿಕ ಹಿನ್ನಲೆಯಾಗಲಿ ಇಲ್ಲ ಎಂದು ತಿಳಿಸಿದ್ದಾಳೆ.

Author Image

Advertisement