For the best experience, open
https://m.bcsuddi.com
on your mobile browser.
Advertisement

ಪತ್ರಕರ್ತನ ಜಾತಿ ಪ್ರಶ್ನಿಸಿದ ರಾಹುಲ್ ಗಾಂಧಿ: ಎಲ್ಲೆಡೆ ಭಾರಿ ವಿರೋಧ

03:12 PM Feb 23, 2024 IST | Bcsuddi
ಪತ್ರಕರ್ತನ ಜಾತಿ ಪ್ರಶ್ನಿಸಿದ ರಾಹುಲ್ ಗಾಂಧಿ  ಎಲ್ಲೆಡೆ ಭಾರಿ ವಿರೋಧ
Advertisement

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆ ಇದೀಗ ಉತ್ತರಪ್ರದೇಶದ ರಾಯ್ ಬರೇಲಿ ತಲುಪಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಟಿವಿ ವರದಿಗಾರರಲ್ಲಿ ನಿಮ್ಮ ಮಾಲಕ ದಲಿತನೇ ಎಂದು ಪ್ರಶ್ನಿಸಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಭಾರತ್ ಜೋಡೋ ನ್ಯಾಯ ಯಾತ್ರೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಇಂಡಿಯಾ ನ್ಯೂಸ್ ನ ವರದಿಗಾರ ಹಾಗೂ ಮಾಲಕ ಜೊತೆ ಒರಟಾಗಿ ವರ್ತಿಸಿದ್ದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ, ನೀವು ಮಾಧ್ಯಮದವರೇ? ನಿಮ್ಮ ಹೆಸರೇನು? ನಿಮ್ಮ ಮಾಲಕನ ಹೆಸರೇನು? ಅವರು ಒಬಿಸಿಯೇ ಅಲ್ಲ , ದಲಿತರೇ ಎಂದು ಪ್ರಶ್ನಿಸಿದ್ದರು.

ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದಂತೆ ಇದಕ್ಕೆ ಸಮಜಾಯಷಿ ನೀಡಿರುವ ಕಾಂಗ್ರೆಸ್, ಮೀಡಿಯಾದಲ್ಲಿ ಮೀಸಲು ಕ್ಷೇತ್ರದ ಮಂದಿ ಎಷ್ಟು ಜನರಿದ್ದಾರೆ ಎಂದಿ ತಿಳಿಯಲು ಈ ರೀತಿಯ ಪ್ರಶ್ನೆಯನ್ನು ರಾಹುಲ್ ಗಾಂಧಿ ಅವರು ಕೇಳಿದ್ದಾರೆ ಎಂದು ತಿಳಿಸಿದೆ.

Advertisement

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ದಿ ಎಡಿಟರ್ ಗಿಲ್ಡ್ ಆಫ್ ಇಂಡಿಯಾ, ಚುನಾವಣ ಸಂದರ್ಭದಲ್ಲಿ ಉದ್ವಿಗ್ನತೆ ಹೆಚ್ಚಾಗದಂತೆ, ಯಾವುದೇ ವ್ಯಕ್ತಿಗೆ ಹಾನಿಯಾಗದಂತೆ ಎಲ್ಲ ರಾಜಕೀಯ ಪಕ್ಷಗಳು ಮತ್ತು ನಾಯಕರು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಅಗ್ರಹಿಸಿದ್ದಾರೆ.

Author Image

Advertisement