ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಪಡಿತರ ವಿತರಕರಿಗೆ ಕಮಿಷನ್‌ ಹೆಚ್ಚಳ: ಸಿಎಂ ಸಿದ್ದರಾಮಯ್ಯ

05:18 PM Mar 01, 2024 IST | Bcsuddi
Advertisement

ಪಡಿತರ ವಿತರಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಹಿ ಸುದ್ದಿ ನೀಡಿದ್ದಾರೆ. ಪ್ರತಿ ಕೆಜಿ ಅಕ್ಕಿಗೆ ನೀಡುವ ಕಮಿಷನ್‌ ಮೊತ್ತವನ್ನು 1.50 ರೂ.ಗೆ ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ.

Advertisement

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗ ಪ್ರತಿ ಕೆಜಿ ಅಕ್ಕಿಗೆ 1.24 ರೂ. ಕಮಿಷನ್‌ ಇದೆ. ಪಡಿತರ ವಿತರಕರ ಸಮಸ್ಯೆ ಗಮನಿಸಿದ್ದೇನೆ.

ಸಚಿವ ಮುನಿಯಪ್ಪ ಅವರೂ ಈ ಬಗ್ಗೆ ಮನವಿ ಮಾಡಿದ್ದಾರೆ. ಎಲ್ಲ ಅಂಶ ಪರಿಗಣಿಸಿ ಕಮಿಷನ್‌ ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

Advertisement
Next Article