For the best experience, open
https://m.bcsuddi.com
on your mobile browser.
Advertisement

ನೀತಿ ಸಂಹಿತೆ ಉಲ್ಲಂಘನೆ: ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲು

03:47 PM Apr 12, 2024 IST | Bcsuddi
ನೀತಿ ಸಂಹಿತೆ ಉಲ್ಲಂಘನೆ  ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲು
Advertisement

ಚೆನ್ನೈ : ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಾಗಿದ್ದು, ಇದೀಗ ಈ ನೀತಿ ಸಂಹಿತೆ ಉಲ್ಲಂಘಿಸಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರ ವಿರುದ್ಧ ಶುಕ್ರವಾರ ಪ್ರಕರಣ ದಾಖಲಾಗಿದೆ.

ಅವರಂಪಾಳ್ಯದ ಪ್ರದೇಶದಲ್ಲಿ ಕಳೆದ ರಾತ್ರಿ ಚುನಾವಣಾ ಪ್ರಚಾರದ ಕಾಲಮಿತಿ ಮೀರಿ ಪ್ರಚಾರ ನಡೆಸಿದ ಆರೋಪದಡಿ ಅಣ್ಣಾಮಲೈ ಹಾಗೂ ಕೊಯಂಬತ್ತೂರು ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರಮೇಶ್ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.

ನೀತಿ ಸಂಹಿತೆಯಂತೆ ರಾತ್ರಿ 10 ಗಂಟೆಯೊಳಗೆ ಅಭ್ಯರ್ಥಿಗಳು ತಮ್ಮ ಚುನಾವಣಾ ಪ್ರಚಾರವನ್ನು ಅಂತ್ಯಗೊಳಿಸಬೇಕಾಗುತ್ತದೆ. ಹೀಗಾಗಿ ಅಣ್ಣಾಮಲೈ ಅವರು ಕಾಲಮಿತಿ ಮೀರಿ ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Advertisement

Author Image

Advertisement