ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನಿನ್ನೆ ಜೈಲಿನ ಮೇಲೆ ಸಿಸಿಬಿ ದಾಳಿ, ಇಂದು ಫೋಟೋ ವೈರಲ್...! ಜೈಲು ರೆಸಾರ್ಟ್ ಆಗಿದ್ಯಾ..?

05:23 PM Aug 25, 2024 IST | BC Suddi
Advertisement

ಬೆಂಗಳೂರು: ಪರಪ್ಪನ ಅಗ್ರಹಾರ ಹಣ, ಅಧಿಕಾರ ಇರುವವರಿಗಾಗಿ ರೆಸಾರ್ಟ್ ರೀತಿ ಅನ್ನೋದು ಪದೇ ಪದೇ ಸಾಬೀತಾಗುತ್ತಿದೆ. ಈ ಹಿಂದೆ ಜೈಲಿನಲ್ಲಿ ಜಯಲಲಿತಾ ಶಶಿಕಲಾಗೆ ರಾಜಾಥಿತ್ಯ ನೀಡಿ ಸಾಕಷ್ಟು ಸುದ್ದಿಯಾಗಿತ್ತು. ಅಷ್ಟೇ ಅಲ್ಲದೆ ಈ ಹಿಂದೆ ರೌಡಿಶೀಟರ್ ಕುಳ್ಳು ರಿಜ್ವಾನ್ ಭರ್ಜರಿ ಬರ್ತ್‌ಡೇ ಮಾಡಿಕೊಂಡಿರೋ ವಿಡಿಯೋ ಕೂಡ ವೈರಲ್ ಆಗಿತ್ತು. ದರ್ಶನ್ ಜೈಲು ಸೇರಿದ ದಿನದಿಂದ ರೌಡಿಶೀಟರ್ ನಾಗ ಎಲ್ಲಾ ವ್ಯವಸ್ಥೆ ಮಾಡಿದ್ದಾನೆ ಅಂತ ಸುದ್ದಿ ಹರಿದಾಡ್ತಿತ್ತು. ಆದ್ರೆ ಇದಕ್ಕೆ ಜೈಲು ಅಧಿಕಾರಿಗಳು ಮಾತ್ರ ಇದೆಲ್ಲಾ ಸುಳ್ಳು ದರ್ಶನ್ ಬ್ಯಾರಕ್ ಬಿಟ್ಟು ಆಚೆ ಬರ್ತಿಲ್ಲ ಅಂತ ಸಬೂಬು ಹೇಳಿಕೊಂಡು ಬರ್ತಿದ್ರು. ಆದ್ರೆ ಈ ಫೋಟೋಗಳನ್ನು ನೋಡಿದ್ರೆ ಬಹುಷ್ಯ ಜನ ಕೂಡ ಊಹೆ ಮಾಡಿರ್ಲಿಲ್ಲ ಜೈಲಲ್ಲಿ ದರ್ಶನ್ ಇಷ್ಟು ಆರಾಮಗಿದ್ದಾನೆ ಅಂತ. ರೆಸಾರ್ಟ್‌ನ ಲಾನ್ ಒಂದರಲ್ಲಿ ನಾಲ್ಕು ಚೇರು ಟೇಬಲ್ ಹಾಕಿ ಕಾಫಿ ಮಗ್ ಹಿಡಿದುಕೊಂಡು ಸಿಗರೇಟ್ ಸೇದಿಕೊಂಡು ಮಜಾ ಮಾಡ್ತಿರೋದು ಕಂಡು ಬಂದಿದೆ. ಜೈಲಲ್ಲಿ ಸಿಗರೇಟ್ ಮಾರಾಟ ಮಾಡಲಾಗುತ್ತದೆ. ಆದ್ರೆ ಎಲ್ಲಾ ಖೈದಿಗಳಿಗೂ ಇದೇ ರೀತಿ ಚೇರು ಟೇಬಲ್ ಹಾಕಿ ಸಿಗರೇಟ್ ಸಿದೋಕೆ ಬಿಡ್ತಾರಾ? ಇಲ್ಲ ಈ ಚೇರು ಟೇಬಲ್ ವ್ಯವಸ್ಥೆಗೆ ಎಷ್ಟು ಹಣ ಸಂದಾಯವಾಗಿದೆ? ಇಲ್ಲ ಯಾರ ಮೂಲಾಜು ಮರ್ಜಿಗೆ ಬಿದ್ದು ರಾಜಾತಿಥ್ಯ ನೀಡ್ತಿರೋದು ಬಹಿರಂಗವಾಗಿದೆ.

Advertisement

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

Advertisement
Next Article