ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನಾಳೆ ಜ.21ರಂದು ಈ ವಾರ್ಡ್ ಗಳಲ್ಲಿ ಕರೆಂಟ್ ಇರಲ್ಲ.!

07:50 AM Jan 20, 2024 IST | Bcsuddi
Advertisement

 

Advertisement

ಚಿತ್ರದುರ್ಗ: ಚಿತ್ರದುರ್ಗ ನಗರ ಉಪವಿಭಾಗ ಘಟಕ-1 ಮತ್ತು ಘಟಕ-3ರ ವ್ಯಾಪ್ತಿಯಲ್ಲಿ ಬರುವ ಕೋಟೆ, ಜಿಲ್ಲಾ ಪಂಚಾಯತ್, ಕಾಪರ್ ಮೈನ್ಸ್, 11 ಕೆ.ವಿ ಮಾರ್ಗಗಳ ತುರ್ತು ನಿರ್ವಹಣಾ ಕೆಲಸಗಳನ್ನು ನಿರ್ವಹಿಸಲು ಇದೇ ಜ.21ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. 

ವಿದ್ಯುತ್ ನಿಲುಗಡೆಗೊಳಪಡುವ ಪ್ರದೇಶಗಳು: ಕೋಟೆ-ಇಂಡಸ್ಟ್ರೀಯಲ್ ಏರಿಯಾ, ಗಾಂಧಿ ನಗರ, ಐಯುಡಿಪಿ ಲೇಔಟ್, ವಿಜ್ಞಾನ ಕಾಲೇಜ್, ಬುದ್ಧ ನಗರ, ಜೋಗಿಮಟ್ಟಿ ರಸ್ತೆ, ಎಸ್.ವಿ.ನಗರ, ಟೀಚರ್ಸ್ ಕಾಲೋನಿ, ಸೂರ್ಯಪುತ್ರ ಸರ್ಕಲ್, ಕಣುಮಪ್ಪ ಲೇಔಟ್, ಜೆ.ಪಿ.ನಗರ ಹಾಗೂ ಸುತ್ತಮುತ್ತಲಿನ ಪ್ರದೇಶ. ಜಿಲ್ಲಾ ಪಂಚಾಯತ್-ಐಯುಡಿಪಿ ಲೇಔಟ್, ಸರಸ್ವತಿ ಪುರಂ, ಕೆ.ಕೆ.ಸರ್ಕಲ್, ಕಾಮನಬಾವಿ ಬಡಾವಣೆ, ಕೋಟೆ ರಸ್ತೆ, ಸರ್ಕಾರಿ ಡಿಪ್ಲೊಮಾ ಕಾಲೇಜ್, ಮಹಾರಾಣಿ ಕಾಲೇಜ್, ದೊಡ್ಡಪೇಟೆ, ದೊಡ್ಡಗರಡಿ ಹಾಗೂ ಸುತ್ತಮುತ್ತಲಿನ ಪ್ರದೇಶ. ಕಾಪರ್ ಮೈನ್ಸ್-ಕುಂಚಿಗನಾಳ್, ಇಂಗಳದಾಳ್, ಕುರುಮರಡಿಕೆರೆ, ಕೆನ್ನೆಡೆಲ, ಕ್ಯಾದಿಗೆರೆ, ಡಿ.ಎಸ್.ಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಚಿತ್ರದುರ್ಗ ನಗರ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

Tags :
ನಾಳೆ ಜ.21ರಂದು ಈ ವಾರ್ಡ್ ಗಳಲ್ಲಿ ಕರೆಂಟ್ ಇರಲ್ಲ.!
Advertisement
Next Article