For the best experience, open
https://m.bcsuddi.com
on your mobile browser.
Advertisement

'ನನ್ನ ವಿರುದ್ಧ 21 ಕುರಿ, ಕಪ್ಪು ಮೇಕೆ, ಕೋಣ, ಹಂದಿ ಬಲಿ ಕೊಟ್ಟು ಅಘೋರಿಗಳಿಂದ ಶತ್ರು ಭೈರವಿ ಯಾಗ' - ಡಿಕೆಶಿ ಸ್ಫೋಟಕ ಹೇಳಿಕೆ

12:55 PM May 31, 2024 IST | Bcsuddi
 ನನ್ನ ವಿರುದ್ಧ 21 ಕುರಿ  ಕಪ್ಪು ಮೇಕೆ  ಕೋಣ  ಹಂದಿ ಬಲಿ ಕೊಟ್ಟು ಅಘೋರಿಗಳಿಂದ ಶತ್ರು ಭೈರವಿ ಯಾಗ    ಡಿಕೆಶಿ ಸ್ಫೋಟಕ ಹೇಳಿಕೆ
Advertisement

ಬೆಂಗಳೂರು: ನನ್ನ ವಿರುದ್ಧ ಕೇರಳದ ದೇವಸ್ಥಾನವೊಂದರಲ್ಲಿ ಅಘೋರಿಗಳಿಂದ ಶತ್ರು ಭೈರವಿ ಎಂಬ ಯಾಗವನ್ನು ಮಾಡಿಸಲಾಗುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ನನ್ನ ವಿರುದ್ಧ ಶತ್ರು ಭೈರವಿ ಯಾಗ ನಡೆಯುತ್ತಿದೆ ಎಂದಿದ್ದಾರೆ. ರಾಜ್ಯದ ಪ್ರಭಾವಿ ರಾಜಕಾರಣಿಯೊಬ್ಬರು ನನ್ನ ಹಾಗೂ ಸಿದ್ದರಾಮಯ್ಯ ವಿರುದ್ಧ ಕೇರಳದಲ್ಲಿ ಶತ್ರು ಭೈರವಿ ಯಾಗ ಮಾಡಿಸುತ್ತಿದ್ದಾರೆ. ಇದಕ್ಕಾಗಿ ಕುರಿ, ಹಂದಿ ಬಲಿ ಕೊಡುವ ಕಾರ್ಯ ಕೂಡ ನಡೆದಿದೆ ಎಂದು ಆರೋಪಿದ್ದಾರೆ. ಈ ಯಾಗವನ್ನು ಯಾರು ಮಾಡಿಸುತ್ತಿದ್ದಾರೆ? ಯಾರು ಯಾರು ಆ ಯಾಗದಲ್ಲಿ ಭಾಗವಹಿಸಿದ್ದಾರೆ? ಇನ್ನೂ ಯಾರು ಈ ಯಾಗದ ಹಿಂದಿದ್ದಾರೆ ಎಂಬ ವಿಚಾರ ನನಗೆ ಗೊತ್ತಿದೆ. ಶತ್ರು ಭೈರವಿ ಯಾಗದಲ್ಲಿ ಪಂಚ ಬಲಿ ಕೊಡುತ್ತಿದ್ದಾರೆ. ಎಲ್ಲಾ ಕೆಂಪು ಬಣ್ಣದ ಜೀವ ಬಲಿ ಕೊಡುತ್ತಾರೆ. 21 ಮೇಕೆ, 3 ಎಮ್ಮೆ, ಕಪ್ಪು ಬಣ್ಣದ 21 ಕುರಿ, 8 ಹಂದಿಯನ್ನು ಬಲಿ ಕೊಡಲಾಗಿದೆ. ಈ ಯಾಗ ಮಾಡಿದ್ರೆ ಮನುಷ್ಯ ಅಥವಾ ಯಾಗ ಮಾಡಿಸಿದ ವ್ಯಕ್ತಿಯ ಶತ್ರು ಶರಶಯ್ಯೆಗೆ ಒಳಗಾಗುತ್ತಾನೆ ಅಂತ ಡಿಕೆಶಿ ವಿವರಿಸಿದ್ದಾರೆ.

Author Image

Advertisement