For the best experience, open
https://m.bcsuddi.com
on your mobile browser.
Advertisement

ನಟ ದರ್ಶನ್ ಜೊತೆಗೆ ವಿಡಿಯೊ‌ ಕಾಲ್‌ನಲ್ಲಿ ಮಾತಾಡಿದ ರೌಡಿಗಳು ಯಾರ್ಯಾರು..?

09:44 AM Aug 26, 2024 IST | BC Suddi
ನಟ ದರ್ಶನ್ ಜೊತೆಗೆ ವಿಡಿಯೊ‌ ಕಾಲ್‌ನಲ್ಲಿ ಮಾತಾಡಿದ ರೌಡಿಗಳು ಯಾರ್ಯಾರು
Advertisement

ಬೆಂಗಳೂರು: ನಟ ದರ್ಶನ್ ವಿಡಿಯೋ ಕಾಲ್ ವೈರಲ್ ಆಗಿದೆ. ಆಪ್ತರೊಬ್ಬರ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತು ನಡೆದಿರೋದು ಪಕ್ಕಾ ಆಗಿದ್ದು, ಕೇವಲ‌ ದರ್ಶನ್ ಅಷ್ಟೇ ಅಲ್ಲದೆ ಬೇರೆ ರೌಡಿಗಳು ಜೈಲಿನಲ್ಲಿ ಮೊಬೈಲ್ ಚಾಕೊಲೇಟ್ ರೀತಿ ಬಳಸುತ್ತಿದ್ದಾರೆ. ಅತ್ಯಾಪ್ತವಾಗಿ ಮಾತನಾಡಿ, 'ಊಟ ಆಯ್ತಾ, ಆರಾಮಾಗಿದ್ದೀನಿ' ಅಂತ ಮಾತುಕತೆ ಮಾಡಿರೋದು ಬ್ಯಾಡರಹಳ್ಳಿ ಮಾಜಿ ರೌಡಿ ಶೀಟರ್ ಜಾನಿ ಅಲಿಯಾಸ್ ಜನಾರ್ಧನ್ ಪುತ್ರ ಸತ್ಯ ಅಂತ ಹೇಳಲಾಗ್ತಿದೆ. ಇನ್ನು ಇವನಿಗೆ ಕಾಲ್ ಮಾಡಿಕೊಟ್ಟವನು ಧರ್ಮ ಬಾಣಸವಾಡಿ ರೌಡಿಶೀಟರ್. ಬಾಣಸವಾಡಿ ರೌಡಿಶೀಟರ್ ಕಾರ್ತಿಕೇಯ ಕೊಲೆ ಪ್ರಕರಣದ ಆರೋಪಿ ಧರ್ಮ. ಈತನ ಮೇಲೆ ಕೋಕಾ ಕಾಯ್ದೆ ಕೂಡ ಹಾಕಲಾಗಿದೆ. ಇನ್ನು ಹೊರಗಿನಿಂದ ಮಾತನಾಡಿರೋನು ಬ್ಯಾಡರಹಳ್ಳಿ ಮಾಜಿ ರೌಡಿಶೀಟರ್ ಜಾನಿ ಅಲಿಯಾಸ್ ಜನಾರ್ದನ್ ಮಗ ಸತ್ಯ. ಜಾನಿ ಮಗ ಸತ್ಯ ಕೂಡ ಇತ್ತೀಚೆಗೆ ಜೈಲಿಗೆ ಹೋಗಿ ಬಂದಿದ್ದ. ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಉಲ್ಟಾ ಮಚ್ಚಲ್ಲಿ ಕೆಎಲ್‌ಇ‌ ಕಾಲೇಜ್ ವಿದ್ಯಾರ್ಥಿಗಳಿಗೆ ಸತ್ಯ ಹೊಡೆದಿದ್ದ. ಜೈಲಿಗೆ ಹೋಗಿ ಸದ್ಯ ಬೇಲ್ ಮೇಲೆ ಬಂದಿದ್ದಾನೆರ. ಹೊರಬಂದವನು ಇತ್ತೀಚೆಗೆ ಮಾರ್ಕೆಟ್ ಧರ್ಮ ನಿಗೆ ವಿಡಿಯೋ ಕಾಲ್ ಮಾಡಿ ದರ್ಶನ್ ಜೊತೆ ಮಾತನಾಡಿದ್ದಾನೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Advertisement

Author Image

Advertisement