ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನಗರ ದೇವತೆ ಉಚ್ಚಂಗಿಯಲ್ಲಮ್ಮ ಹಾಗೂ ಕಣಿವೆಮಾರಮ್ಮ ವಿಶೇಷ ಅಲಂಕಾರ

07:29 AM Aug 21, 2024 IST | BC Suddi
Advertisement

ಚಿತ್ರದುರ್ಗ : ಶ್ರಾವಣ ಮಾಸದ ಮಂಗಳವಾರದಂದು ನಗರ ಪೊಲೀಸ್ ಠಾಣೆ ಆವರಣದಲ್ಲಿರುವ ಕಣಿವೆಮಾರಮ್ಮನಿಗೆ ವಿಶೇಷವಾಗಿ ಅಲಂಕರಿಸಲಾಗಿತ್ತು.

Advertisement

ವೀಳೆದೆಲೆ, ಗುಲಾಬಿ, ಸೇವಂತಿಗೆ, ಮಲ್ಲಿಗೆ, ಕನಕಾಂಬರ ಹೂವುಗಳಿಂದ ಸಿಂಗರಿಸಲಾಗಿತ್ತು.

ಶ್ರಾವಣ ಮಾಸವಾಗಿರುವುದರಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಧಾವಿಸಿ ಕಣಿವೆಮಾರಮ್ಮನ ದರ್ಶನ ಪಡೆದು ಶ್ರದ್ದಾಭಕ್ತಿಯನ್ನು ಸಮರ್ಪಿಸಿದರು.

ಚಿತ್ರದುರ್ಗ : ಕೋಟೆ ರಸ್ತೆಯಲ್ಲಿರುವ ಉಚ್ಚಂಗಿಯಲ್ಲಮ್ಮನಿಗೆ ಶ್ರಾವಣ ಮಾಸದ ಮಂಗಳವಾರದಂದು ನಾನಾ ಬಗೆಯ ತರಕಾರಿಗಳಿಂದ ಅಲಂಕರಿಸಿ ಪೂಜಿಸಲಾಯಿತು.

ಕ್ಯಾರೆಟ್, ಬೆಂಡೆಕಾಯಿ, ಹಿರೇಕಾಯಿ, ಎಲೆಕೋಸು, ಹೂಕೋಸು, ಮೂಲಂಗಿ, ಈರುಳ್ಳಿ, ಸೌತೆಕಾಯಿ, ಸೀಮೆ ಬದನೆಕಾಯಿ, ದುಂಡು ಮೆಣಸಿನಕಾಯಿ, ಬೀನ್ಸ್, ಆಲುಗೆಡ್ಡೆ ಬೀಟ್ರೂಟ್ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಬಗೆಯ ತರಕಾರಿಗಳಿಂದ ಸಿಂಗರಿಸಲಾಗಿತ್ತು.

ಬೆಳಗಿನಿಂದ ಸಂಜೆಯತನಕ ಅಪಾರ ಭಕ್ತರು ಧಾವಿಸಿ ಉಚ್ಚಂಗಿಯಲ್ಲಮ್ಮನನ್ನು ಕಣ್ತುಂಬಿಕೊಂಡರು.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Tags :
ನಗರ ದೇವತೆ ಉಚ್ಚಂಗಿಯಲ್ಲಮ್ಮ ಹಾಗೂ ಕಣಿವೆಮಾರಮ್ಮ ವಿಶೇಷ ಅಲಂಕಾರ
Advertisement
Next Article