For the best experience, open
https://m.bcsuddi.com
on your mobile browser.
Advertisement

ದೆಹಲಿ ಮದ್ಯನೀತಿ ಹಗರಣ - ಕೇಜ್ರಿವಾಲ್ ಮೂರನೇ ಬಾರಿ ಇ.ಡಿ ಸಮನ್ಸ್

09:26 AM Dec 23, 2023 IST | Bcsuddi
ದೆಹಲಿ ಮದ್ಯನೀತಿ ಹಗರಣ   ಕೇಜ್ರಿವಾಲ್ ಮೂರನೇ ಬಾರಿ ಇ ಡಿ ಸಮನ್ಸ್
Advertisement

ನವದೆಹಲಿ: ದೆಹಲಿ ಸರಕಾರದ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ (ED) ಮೂರನೇ ಬಾರಿಗೆ ಸಮನ್ಸ್ ಜಾರಿ ಮಾಡಿದೆ. 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಪ್ರತಿಪಕ್ಷಗಳ ಧ್ವನಿಯನ್ನ ಅಡಗಿಸಲು ಬಯಸುವ ರಾಜಕೀಯ ಪ್ರತಿಸ್ಪರ್ಧಿಗಳ ಆಜ್ಞೆಯ ಮೇರೆಗೆ ಅವುಗಳನ್ನ ನೀಡಲಾಗಿದೆ ಎಂದು ಆರೋಪಿಸಿ ದೆಹಲಿ ಸಿಎಂ ಗುರುವಾರ ಇ.ಡಿ ಹೊರಡಿಸಿದ ಎರಡನೇ ಸಮನ್ಸ್ ತಪ್ಪಿಸಿಕೊಂಡಿದ್ದರು. ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಇಡಿ ಗುರುವಾರ ವಿಚಾರಣೆಗೆ ಕರೆದಿದೆ. 10 ದಿನಗಳ ವಿಪಸ್ಸನಾ ಧ್ಯಾನ ಕೋರ್ಸ್‌ಗಾಗಿ ಮುಖ್ಯಮಂತ್ರಿ ಬುಧವಾರ ಅಜ್ಞಾತ ಸ್ಥಳಕ್ಕೆ ತೆರಳಿದರು.

Author Image

Advertisement