ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ದೀಪಾವಳಿ ಹಬ್ಬಕ್ಕೆ ವಿಶೇಷ ಗಿಫ್ಟ್‌ - ಅರ್ಹ ಮಹಿಳೆಯರಿಗೆ ಫ್ರೀ ಗ್ಯಾಸ್‌ ಸಿಲಿಂಡರ್

03:31 PM Oct 22, 2024 IST | BC Suddi
Advertisement

ಹಬ್ಬ ಎಂದರೆ ಎಲ್ಲರಿಗೂ ಸಂಭ್ರಮ. ಆದರೆ ಬೆಲೆ ಏರಿಕೆ ಇತ್ತೀಚಿನ ದಿನಗಳಲ್ಲಿ ಹಬ್ಬದ ಸಂಭ್ರಮ ಕಸಿದುಕೊಳ್ಳುವಂತೆ ಮಾಡಿದೆ. ಇದನ್ನು ಗಮನಿಸಿ ಆಂಧ್ರ ಪ್ರದೇಶದಲ್ಲಿ ಅರ್ಹ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸಿಲಿಂಡರ್ ವಿತರಿಸುವ ‘ದೀಪಂ ಯೋಜನೆ’ಗೆ ಅಕ್ಟೋಬರ್​ 31ರಂದು ಚಾಲನೆ ನೀಡಲಾಗುತ್ತದೆ.

Advertisement

ಚುನಾವಣೆ ಸಂದರ್ಭದಲ್ಲಿ ಟಿಡಿಪಿ ನೀಡಿದ್ದ ಆರು ಪ್ರಮುಖ ಭರವಸೆಗಳಲ್ಲಿ, ವರ್ಷಕ್ಕೆ ಮೂರು ಅಡುಗೆ ಅನಿಲ ಸಿಲಿಂಡರ್​ಗಳನ್ನು ಉಚಿತವಾಗಿ ವಿತರಿಸುವ ಬಗ್ಗೆ ಹೇಳಿತ್ತು. ಇದೀಗ ಸಿಎಂ ಚಂದ್ರಬಾಬು ನಾಯ್ಡು ಅಮರಾವತಿಯ ಸಿಬ್ಬಂದಿ, ಸಚಿವಾಲಯದಲ್ಲಿ ಸಭೆ ನಡೆಸಿ ದೀಪಂ ಯೋಜನೆಗೆ ಚಾಲನೆ ನೀಡುವ ಬಗ್ಗೆ ಚರ್ಚಿಸಿದ್ದಾರೆ. ಆ ಮೂಲಕ ಆಂಧ್ರ ಪ್ರದೇಶದ ಅರ್ಹ ಮಹಿಳೆಯರು, ದೀಪಾವಳಿ ಹಬ್ಬದ ಸಡಗರದಲ್ಲಿ ಉಚಿತವಾಗಿ ಸಿಲಿಂಡರ್​ ಪಡೆಯಲಿದ್ದಾರೆ.
ಈ ಸಂಬಂಧ ಆಂಧ್ರ ಮುಖ್ಯಮಂತ್ರಿ ಎನ್​. ಚಂದ್ರಬಾಬು ನಾಯ್ಡು ಅವರು ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸರ್ಕಾರದ ಸಚಿವರುಗಳು, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್​ನ ಅಧಿಕಾರಿಗಳು ಭಾಗಿಯಾಗಿದ್ದರು. ಈ ವೇಳೆ ದೀಪಂ ಯೋಜನೆ ಬಗ್ಗೆ ಮಾಹಿತಿ ನೀಡಲಾಗಿದೆ.

Advertisement
Next Article