For the best experience, open
https://m.bcsuddi.com
on your mobile browser.
Advertisement

-----ದಾಸೋಹದ ಸಂಗಣ್ಣ  ಅವರ ವಚನ …!

07:44 AM Dec 30, 2023 IST | Bcsuddi
     ದಾಸೋಹದ ಸಂಗಣ್ಣ  ಅವರ ವಚನ …
Advertisement

ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.

Advertisement

ವಚನ: :

ಬೇವಿನ ಮರನನೇರಿ ಬೆಲ್ಲವ ಮೆದ್ದಡೆ ಕಹಿಯಾದುದುಂಟೆ?

ಕಾಳೋರಗನ ಹೆಡೆಯ ಮೆಟ್ಟಿ ಹಾಲ ಕುಡಿದಡೆ

ಹಾಲಾಹಲ ಒಡಲನೇರಿದುದುಂಟೆ?

ಸಂಜೀವನದ ಫಲವ ಕಂಡು ಚಪ್ಪಿರಿದಲ್ಲಿ ಆತ್ಮಕ್ಕೆ ಸಲೆ ಸಂದುದುಂಟೆ?

ಇಂತೀ ಅವಗುಣವನರಸದೆ ಗುಣಜ್ಞ ತಾನಾದ ಮತ್ತೆ

ಅವಗುಣ ವೇಷದಲ್ಲಿ ಅಡಗಿತ್ತು, ಸದ್ಗುಣ ವಸ್ತುವಿನಲ್ಲಿ ಹೊದ್ದಿತ್ತು.

ಇಂತೀ ಗುರುವಿನ ಇರವ ವಿಚಾರಿಸಿದಲ್ಲಿ ಭಕ್ತಿ ಹಾರಿತ್ತು,

ಸತ್ಯ ಜಾರಿತ್ತು, ವಿರಕ್ತಿ ತೂರಿತ್ತು.

ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,

ಮಾತುಳಂಗ ಮಧುಕೇಶ್ವರನು.

-ದಾಸೋಹದ ಸಂಗಣ್ಣ

Tags :
Author Image

Advertisement