ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ದಾಖಲೆಗೆ ವೈಟ್ನರ್ ಹಚ್ಚಿಲ್ಲ ಎಂದು ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ - ರವಿಕುಮಾರ್ ಸವಾಲ್

03:04 PM Aug 22, 2024 IST | BC Suddi
Advertisement

ಬೆಂಗಳೂರು: ರಾಜ್ಯಪಾಲರಿಗೆ ಕಾಂಗ್ರೆಸ್ ಸರ್ಕಾರ ಅವಮಾನ ಮಾಡಿದೆ. ಹಾಗೇ ಮುಡಾ ಪ್ರಕರಣದಲ್ಲಿ ಸಿಎಂ ರಾಜೀನಾಮೆ ಕೊಡಬೇಕು ಎಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ವಿಧಾನಪರಿಷತ್ ಸದಸ್ಯ ರವಿಕುಮಾರ್, ಕಾಂಗ್ರೆಸ್ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು. ದಾಖಲೆಗೆ ವೈಟ್ನರ್ ಹಚ್ಚಿಲ್ಲ ಎಂದರೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ. ಧಮ್ ಇದ್ದರೆ ಸಿದ್ದರಾಮಯ್ಯನವರು ಧರ್ಮಸ್ಥಳ ಮಂಜುನಾಥ ದೇವಸ್ಥಾನಕ್ಕೆ ಬರಲಿ. ಪಾರ್ವತಿ ಅವರ ಪತ್ರದಲ್ಲಿ ವೈಟ್ನರ್ ಹಚ್ಚಿದ್ದು ನಮ್ಮ ಸರ್ಕಾರದಲ್ಲಿ ಅಲ್ಲ ಅಂತ ಸಿದ್ದರಾಮಯ್ಯ ಆಣೆ ಮಾಡಲಿ ಎಂದು ಸವಾಲ್ ಹಾಕಿದರು. ಸರ್ಕಾರಕ್ಕೆ ಧಮ್ ತಾಕತ್ ಇದ್ದರೆ ಮುಡಾ ಕೇಸ್ ಸಿಬಿಐಗೆ ಕೊಡಲಿ. ಸಿದ್ದರಾಮಯ್ಯ ಸುಳ್ಳು ರಾಮಯ್ಯ, ಅಶುದ್ಧ ರಾಮಯ್ಯ ಎಂದು ಸಿಎಂ‌ ವಿರುದ್ಧ ಕಿಡಿಕಾರಿದ ರವಿಕುಮಾರ್, ಈ ಸರ್ಕಾರ ಬಂದ ನಂತರ ಮುಡಾದಲ್ಲಿ 1950 ನಿವೇಶನಗಳ ಅಕ್ರಮ ಹಂಚಿಕೆ ಆಗಿದೆ. ಮರಿಗೌಡ, ಬೈರತಿ ಸುರೇಶ್, ಭ್ರಷ್ಟರಾಮಯ್ಯ ಸೇರಿಕೊಂಡು ಅಕ್ರಮ ಮಾಡಿದ್ದಾರೆ. ಸೈಟ್‌ಗಳನ್ನು ಕೊಳ್ಳೆ ಹೊಡೆದಿದ್ದಾರೆ ಎಂದು ಆರೋಪಿಸಿದರು..

Advertisement

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Advertisement
Next Article