ದರ್ಶನ್ & ಗ್ಯಾಂಗ್ ವಿರುದ್ಧ 4,500 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ - ಪವಿತ್ರಾ ಗೌಡ A1 ಆರೋಪಿ
12:13 PM Sep 04, 2024 IST | BC Suddi
Advertisement
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ರು ಇಂದು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಸುಮಾರು 4, 500 ಪುಟಗಳ ಚಾರ್ಜ್ಶೀಟ್ಅನ್ನು 24ನೇ ಎಸಿಎಂಎಂ ಕೋರ್ಟ್ಗೆ ಸಲ್ಲಿಸಿದ್ದಾರೆ. ಕಾರ್ಟನ್ ಬಾಕ್ಸ್ ನಲ್ಲಿ ಚಾರ್ಜ್ ಶೀಟ್ ಪ್ರತಿಯನ್ನ ಕಾಮಾಕ್ಷಿಪಾಳ್ಯ ಇನ್ಸ್ಪೆಕ್ಟರ್ ನಾಗೇಶ್ ಕೋರ್ಟ್ಗೆ ತೆಗೆದುಕೊಂಡು ಹೋಗಿ ಸಲ್ಲಿಸಿದ್ದಾರೆ. ಇನ್ನು ಚಾರ್ಜ್ಶೀಟ್ನಲ್ಲಿ ಪವಿತ್ರಾ ಗೌಡ A1 ಹಾಗೂ ದರ್ಶನ್ A2 ಹಾಗೂ ಉಳಿದಂತೆ ಮೊದಲು ಯಾವ ಯಾವ ಆರೋಪಿಗಳು ಯಾವ ಯಾವ ಸ್ಥಾನದಲ್ಲಿದ್ರೋ ಅದೇ ಸ್ಥಾನದಲ್ಲಿ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.