ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ದರ್ಶನಗೆ ಗಂಡಾಂತರ ಇದೆ ಅಂತ ಮೊದಲೇ ಹೇಳಿದ್ದೆ : ನಿರ್ದೇಶಕ ಇಂದ್ರಜಿತ್ ಲಂಕೇಶ್

01:24 PM Jun 13, 2024 IST | Bcsuddi
Advertisement

ಹುಬ್ಬಳ್ಳಿ : ರೇಣುಕಾಸ್ವಾಮಿ ಕೊಲೆ ಪ್ರಕರಣ ನಟ ದರ್ಶನ್ ಮತ್ತು ಗ್ಯಾಂಗ್ ಬಂಧನವಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ. ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್, ಮುಂದೆ ಅನಾಹುತ ಆಗುತ್ತದೆ ಎಂದು ಹೇಳಿದ್ದೆ, ಆದರೂ ದರ್ಶನ್ ಕೇಳಲಿಲ್ಲ. ಸದ್ಯ ಹೀಗೆ ಆಗಿದೆ. ನಾನು ಕೂಡಾ ದರ್ಶನ್ ಜೊತೆ ಎರಡು ಚಿತ್ರ ಮಾಡಿದ್ದೇನೆ. ನಾನ್ಯಾಕೆ ದರ್ಶನ್‌ಗೆ ಟಾಂಗ್ ಕೊಡಬೇಕು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದರು. ಮುಂದೆ ನೀವು ನೋಡತಾ ಇರಿ ಇನ್ನೂ ಈ ಪ್ರಕರಣ ಎಲ್ಲೆಲ್ಲಿಗೆ ಹೋಗುತ್ತದೆ. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಮಗನಿಗೆ ದೇವರು ಶಕ್ತಿ ಕೊಡಲಿ. ಇತ್ತ ಗಂಡನನ್ನು ಕಳೆದುಕೊಂಡ ರೇಣುಕಾಸ್ವಾಮಿ ಪತ್ನಿಗೆ ದುಃಖವನ್ನು ತಡೆದುಕೊಳ್ಳುವ ಶಕ್ತಿ ದೇವರು ನೀಡಲಿ. ಸರ್ಕಾರ ಮೌನವಾಗಿ ಸುಮ್ಮನೆ ಕುಳಿತುಕೊಳ್ಳದೆ, ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಬೇಕು ಎಂದರು.

Advertisement

Advertisement
Next Article