For the best experience, open
https://m.bcsuddi.com
on your mobile browser.
Advertisement

ತೋಟಗಾರಿಕೆ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ತರಕಾರಿ ಬೀಜ ಮತ್ತು ಸಸಿ ಉಚಿತ ವಿತರಣೆ

09:37 AM Jan 06, 2024 IST | Bcsuddi
ತೋಟಗಾರಿಕೆ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ತರಕಾರಿ ಬೀಜ ಮತ್ತು ಸಸಿ ಉಚಿತ ವಿತರಣೆ
Advertisement

ತೋಟಗಾರಿಕೆ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ 2023 24 ರಲ್ಲಿ ಅರ್ಹ ರೈತರಿಂದ ಉತ್ತಮ ಗುಣಮಟ್ಟದ ತರಕಾರಿ ಬೀಜಗಳನ್ನು ವಿತರಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪೌಷ್ಟಿಕಾಂಶಗಳ ಸಾಗರಗಳು ತರಕಾರಿಗಳು ಆಗಿದ್ದು ಕಡಿಮೆ ಅವಧಿಯಲ್ಲಿ ಕಡಿಮೆ ವೆಚ್ಚದಲ್ಲಿ ಕಡಿಮೆ ಜಾಗದಲ್ಲಿ ಅಧಿಕ ಇರುವರೆ ಹಾಗೂ ಅಧಿಕ ಲಾಭ ಪಡೆದುಕೊಳ್ಳಲು ಭರಿತ ವಿವಿಧ ತಳಿಯ ತರಕಾರಿ ಬೀಜಗಳನ್ನು ತೋಟಗಾರಿಕೆ ಇಲಾಖೆಯಿಂದ ವಿತರಿಸಲು ನಿರ್ಧರಿಸಲಾಗಿದೆ.

ರೈತರಿಗೆ ಸಹಾಯ ಧನ ಸೌಲಭ್ಯ :

ರೈತರಿಗೆ ಸರ್ಕಾರವು ತೋಟಗಾರಿಕೆ ಇಲಾಖೆಯಿಂದ ಈ ತರಕಾರಿ ತೋಟಗಳಿಗೆ ಹನಿ ನೀರಾವರಿ ಸೌಲಭ್ಯವನ್ನು ಅಳವಡಿಸಿಕೊಳ್ಳಲು ಸಹಾಯಧನವನ್ನು ನೀಡಲಾಗುತ್ತದೆ. ಅರ್ಹ ರೈತರು fid ಸಂಖ್ಯೆ ಉತಾರ ಖಾತೆ ಉತಾರ ಎರಡು ಪಾಸ್ಪೋರ್ಟ್ ಸೈಜ್ ಫೋಟೋ ನೀರಾವರಿ ಸರ್ಟಿಫಿಕೇಟ್ ನೊಂದಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಯಾರೆಲ್ಲ ಅರ್ಜಿ ಸಲ್ಲಿಸಬಹುದು :

ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಶಿರಹಟ್ಟಿ ಮತ್ತು ಲಂಕೇಶ್ವರ ತಾಲೂಕಗಳ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೊಡ್ಡ ರೈತರು ಮಹಿಳೆಯರು ವಿಕಲಚೇತನರು ಹಾಗೂ ಅವರ ಅವಲಂಬಿತ ಕುಟುಂಬದವರು ಸಣ್ಣ ಮತ್ತು ಅತಿ ಸಣ್ಣ ರೈತರು ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿತ್ತು ಜನವರಿ ಹತ್ತರ ಒಳಗಾಗಿ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಹೀಗೆ ತೋಟಗಾರಿಕೆ ಇಲಾಖೆಯಿಂದ ತರಕಾರಿ ಬೀಜ ಮತ್ತು ಸಸಿ ವಿತರಣೆಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು ಅರ್ಹ ಅಭ್ಯರ್ಥಿಗಳು ಇದಕ್ಕೆ ಅರ್ಜಿಯನ್ನು ಸಲ್ಲಿಸಿ. ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಅಥವಾ ಬಂಧು ಮಿತ್ರರು ಯಾರಾದರೂ ತರಕಾರಿ ಬೆಳೆಯುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
Advertisement
Author Image

Advertisement