ತಿರುಪತಿ ಲಡ್ಡು ವಿವಾದದ : ರಾಜ್ಯದ ಎಲ್ಲಾ ದೇಗುಲಗಳಲ್ಲಿ ಕಡ್ಡಾಯ ನಂದಿನಿ ತುಪ್ಪವನ್ನೇ ಬಳಿಸಲು ಆದೇಶ
09:49 AM Sep 21, 2024 IST
|
BC Suddi
Advertisement
ಬೆಂಗಳೂರು : ತಿರುಪತಿ ಲಡ್ಡು ವಿವಾದ ಇಡೀ ದೇಶಾದ್ಯಂತ ಚರ್ಚೆ ನಡೆಯುತ್ತಿದೆ ಇದ್ರ ಬೆನ್ನಲ್ಲೇ ರಾಜ್ಯದ ಎಲ್ಲಾ ದೇಗುಲಗಳಲ್ಲಿ ಕೆಎಂಎಫ್ ನಂದಿನಿ ತುಪ್ಪ ಕಡ್ಡಾಯವಾಗಿ ಬಳಿಸಲು ಮುಜುರಾಯಿ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ಎಲ್ಲಾ ದೇವಾಲಯಗಳಲ್ಲಿ ಪ್ರಸಾದ ತಯಾರಿಕೆಗೆ ನಂದಿನಿ ತುಪ್ಪವನ್ನೇ ಕಡ್ಡಾಯವಾಗಿ ಬಳಸಿಲು ಆದೇಶ ಹೊರಡಿಸಿದೆ. ದೇವಾಲಯಗಳಲ್ಲಿ ಪ್ರಸಾದ ಸೇರಿದಂತೆ ದೀಪಗಳಿಗೂ ಸಹ ನಂದಿನಿ ತುಪ್ಪವನ್ನೇ ಬಳಕೆ ಮಾಡಲು ಆದೇಶ ಹೊರಡಿಸಿದೆ.ಅಲ್ಲದೇ ದೇಗುಲಗಳಲ್ಲಿ ನೀಡುವ ಪ್ರಸಾದದ ಬಗ್ಗೆ ಗುಣಮಟ್ಟ ಕಾಯ್ದುಕೊಳ್ಳಲು ಸೂಚಿಸಿದೆ.
Advertisement
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ
Next Article