ತಾಲ್ಲೂಕು ಕಚೇರಿಯಲ್ಲಿ ಮೂವರು ಲೋಕಾಯುಕ್ತ ಬಲೆಗೆ.!
05:04 PM Jul 31, 2024 IST
|
BC Suddi
Advertisement
Advertisement
ಬೆಂಗಳೂರು : ಪಹಣಿ ತಾಳೆ ಮಾಡಿಕೊಡಲು ಲಂಚ ಸ್ವೀಕರಿಸುತ್ತಿರುವಾಗಲೇ ದಕ್ಷಿಣ ತಾಲೂಕಿನ ವಿಶೇಷ ತಹಶೀಲ್ದಾರ್ ನಾಗರಾಜ ವಿ ಹಾಗೂ ತಹಶೀಲ್ದಾರ್ ಕಚೇರಿ ಮ್ಯಾನೇಜರ್ ಮಂಜುನಾಥ, ಕಂಪ್ಯೂಟರ್ ಆಪರೇಟರ್ ಹೇಮಂತ್ ಬಲೆಗೆ ಬಿದ್ದಿದ್ದು, ಬೆಂಗಳೂರು ದಕ್ಷಿಣ ತಹಶೀಲ್ದಾರ್ ಕಚೇರಿಯ ಕಂಪ್ಯೂಟರ್ ಹೇಮಂತ್ 2,00,000 ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಪಹಣಿಯಲ್ಲಿನ ಕಲಂ 3 ಹಾಗೂ 9 ತಾಳೆ ಮಾಡಿಕೊಡಲು ಲಂಚಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಹೇಮಂತ್ ಮೂಲಕ 2.5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಸ್ವೀಕರಿಸುತ್ತಿದ್ದ ಹೇಮಂತ್ ನನ್ನು ಇದೀಗ ವಶಕ್ಕೆ ಪಡೆದು ಲೋಕಾಯುಕ್ತ ಪೊಲೀಸರ ವಿಚಾರಣೆ ನಡೆಸುತ್ತಿದ್ದಾರೆ.
Next Article